ನವದೆಹಲಿ: ಹೊಸ ಸುಧಾರಣೆಗಳೊಂದಿಗೆ ಭಾರತದ ಬಗೆಗಿನ ಜಾಗತಿಕ ನಿರೂಪಣೆ ಬದಲಾಗಿದೆ ಮತ್ತು ದೇಶದ ಕೈಗಾರಿಕಾ ವಲಯ ಇದಕ್ಕೆ ಸಾತ್ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಜಗತ್ತಿನಲ್ಲಿ ನಡೆಯುತ್ತಿರುವ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಸುಧಾರಣೆಗಳು, ವ್ಯವಹಾರವನ್ನು ಸುಲಭಗೊಳಿಸುವುದು, ಕಾರ್ಮಿಕ ಕಾನೂನುಗಳ ಅನುಸರಣೆ ಮತ್ತು ನಾವೀನ್ಯತೆಗಳೊಂದಿಗೆ ಎದ್ದು ನಿಂತಿರುವುದು ಜಗತ್ತಿನ ದೃಷ್ಟಿಯನ್ನು ಬದಲಾಯಿಸಿದೆ. ” ಏಕೆ ಭಾರತ? “ಎಂಬ ಹಿಂದಿನ ಮಾತಿನ ಕೋನವು” ಏಕೆ ಭಾರತವಲ್ಲ? ” ಎಂಬ ದೃಷ್ಟಿಗೆ ತಿರುಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
“ಹೊಸ ಭಾರತವು ತನ್ನ ಶಕ್ತಿಯನ್ನು ಅವಲಂಬಿಸಿ, ತನ್ನದೇ ಆದ ಸಂಪನ್ಮೂಲಗಳನ್ನು ಅವಲಂಬಿಸಿ, ಸ್ವಾವಲಂಬಿ ಭಾರತವನ್ನು ಮುಂದಕ್ಕೆ ತರುತ್ತಿದೆ ಮತ್ತು ಈ ಗುರಿಯನ್ನು ಸಾಧಿಸಲು ಉತ್ಪಾದನೆಯಲ್ಲಿ ನಾವು ವಿಶೇಷ ಗಮನ ಹರಿಸಿದ್ದೇವೆ. ಉತ್ಪಾದನೆಯನ್ನು ಉತ್ತೇಜಿಸಲು ನಾವು ನಿರಂತರವಾಗಿ ಸುಧಾರಣೆಗಳನ್ನು ತರುತ್ತಿದ್ದೇವೆ. 21 ನೇ ಶತಮಾನದ ಆರಂಭದಲ್ಲಿ, ಅಟಲ್ಜಿ ಭಾರತವನ್ನು ಹೆದ್ದಾರಿಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದ್ದರು. ಇಂದು, ದೇಶದಲ್ಲಿ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ” ಎಂದು ಪ್ರಧಾನಿ ಹೇಳಿದರು.