ನವದೆಹಲಿ: ಡಿಸೆಂಬರ್ 23ರಂದು ಕಿಸಾನ್ ದಿವಸ್ ಆಚರಿಸಲು ನಿರ್ಧರಿಸಿದ್ದು, ಅಂದು ದೇಶವಾಸಿಗಳು ದಿನದ ಒಂದು ಹೊತ್ತು ಆಹಾರ ಸೇವಿಸದೇ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪ್ರತಿಭಟನಾಕಾರ ರೈತರು ಕೋರಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಅಷ್ಟೇ ಅಲ್ಲದೆ ಪ್ರತಿಭಟನೆ ನಡೆಯುತ್ತಿರುವ ಎಲ್ಲ ಪ್ರದೇಶಗಳಲ್ಲೂ ರೈತರು ಸೋಮವಾರ ಒಂದು ದಿನದ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಅದರೊಂದಿಗೆ ಡಿಸೆಂಬರ್ 25ರಿಂದ 27ರವರೆಗೆ ಹರ್ಯಾಣದ ಹೆದ್ದಾರಿಗಳಲ್ಲಿ ಟೂಲ್ ಸಂಚಾರವನ್ನು ತಡೆಯುವುದಾಗಿಯೂ ಘೋಷಿಸಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ 25 ದಿನ ಪೂರೈಸಿದ್ದು, ಸಿಂಘು ಗಡಿಯಲ್ಲಿ ಭಾನುವಾರ ಸಂಜೆ ನಡೆದ ಸುದ್ದಿಗೋಷ್ಠಿ ಯಲ್ಲಿ ಸ್ವರಾಜ್ ಇಂಡಿಯಾ ಸ್ಥಾಪಕ ಯೋಗೇಂದ್ರ ಯಾದವ್ ಈ ಘೋಷಣೆ ಮಾಡಿದ್ದಾರೆ.