News Kannada
Saturday, April 01 2023

ದೇಶ-ವಿದೇಶ

ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಳ್ಳಲು ಗಡಿಯತ್ತ ತೆರಳಿದ ಆಫ್ಘನ್ನರು

Photo Credit :

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಧಿಕೃತವಾಗಿ ಆರಂಭವಾಗಿದೆ. ಆದರೆ ಆಫ್ಘನ್ನರ ದೇಶ ತೊರೆಯುವ ಬಯಕೆ ಇನ್ನೂ ಹಾಗೆ ಇದೆ. ಕಾಬೂಲ್ ವಿಮಾನ ನಿಲ್ದಾಣ ಸ್ತಬ್ಧವಾಗಿದ್ದು, ಯಾವುದೇ ವಿಮಾನದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿಲ್ಲ. ಆದರೂ ಧೃತಿಗೆಡದ ಜನ ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಳ್ಳಲು ಕಾಲದಾರಿಯನ್ನೇ ಆರಿಸಿದ್ದಾರೆ.

ಜನರು ಇದೀಗ ಪಾಕಿಸ್ತಾನ ಹಾಗೂ ಇರಾನ್ ದೇಶಗಳ ಭೂ ಗಡಿಗಳತ್ತ ತೆರಳುತ್ತಿದ್ದಾರೆ. ಆದರೆ ಇಲ್ಲಿ ಯಾವ ಬಸ್, ರೈಲು ವಿಮಾನವೂ ಇಲ್ಲ. ಕಾಲದಾರಿಯೊಂದೆ ಕಡೆಯ ಆಯ್ಕೆಯಾಗಿ ಉಳಿದಿದೆ. ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಗಡಿ ಟಾರ್ಕಮ್‌ನಲ್ಲಿ ಪ್ರವೇಶ ದ್ವಾರ ತೆರೆಯುವುದಕ್ಕೆ ಆಫ್ಘನ್ನರು ಕಾಯುತ್ತಿದ್ದಾರೆ. ಇನ್ನು ಆಫ್ಘನ್, ಇರಾನ್ ನಡುವಿನ ಇಸ್ಲಾಂ ಕ್ವಾಲಾ ಗಡಿಠಾಣೆಯಲ್ಲಿ ಸಾವಿರಾರು ಮಂದಿ ಈಗಾಗಲೇ ಜಮಾಯಿಸಿದ್ದಾರೆ.

ತಜಕಿಸ್ತಾನ 1 ಲಕ್ಷ ಆಫ್ಘನ್ ನಿರಾಶ್ರಿತರನ್ನು ಸ್ವೀಕರಿಸಲು ಒಪ್ಪಿದ್ದು, ಪಾಕಿಸ್ತಾನವೂ ಈವರೆಗೆ 14 ಲಕ್ಷಕ್ಕೂ ಹೆಚ್ಚು ಆಫ್ಘನ್ ನಿರಾಶ್ರಿತರಿಗೆ ನೆಲೆ ನೀಡಿದೆ. ಆಫ್ಗನ್ ತೊರೆಯಲು ಬಯಸುತ್ತಿರುವ ಜನರಿಗೆ ಅವಕಾಶ ಮಾಡಿಕೊಡಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ನಿರ್ಣಯದಲ್ಲಿ ತಾಲಿಬಾನ್‌ಗೆ ಮನವಿ ಮಾಡಲಾಗಿದೆ.

See also  ಅಫ್ಘಾನಿಸ್ತಾನದಲ್ಲಿ ಏಳು ಮಂದಿ ಸುರಕ್ಷಿತವಾಗಿ ಮಂಗಳೂರಿಗೆ ವಾಪಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು