ನವದೆಹಲಿ : ಭಾರತದಲ್ಲಿ ಪ್ಯಾಂಡೆಮಿಕ್ ಹಂತದಲ್ಲಿದ್ದ ಕೋವಿಡ್-19 ಸೋಂಕು ಈಗ ಎಪಿಡೆಮಿಕ್ ಹಂತ ತಲುಪುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಎಪಿಡೆಮಿಕ್ ಹಂತದಲ್ಲಿ ಸೋಂಕು ಪ್ರಸರಣ ಮಧ್ಯಮ ಮಟ್ಟದಲ್ಲಿರುತ್ತದೆ ಹಾಗೂ ಜನಸಂಖ್ಯೆ ವೈರಾಣುವಿನೊಂದಿಗೆ ಜೀವಿಸುವುದನ್ನು ಕಲಿಯುವ ಹಂತವಾಗಿದೆ ಎಂದು ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ದಿ ವೈರ್ ಮಾಧ್ಯಮದ ಕರಣ್ ಥಾಪರ್ ಅವರೊಂದಿಗೆ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್, ಕೋವ್ಯಾಕ್ಸಿನ್ ಗೆ ಕ್ಲಿಯರೆನ್ಸ್ ನೀಡುವ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೋವ್ಯಾಕ್ಸಿನ್ ಕುರಿತು ತೃಪ್ತಿದಾಯಕ ಅಭಿಪ್ರಾಯಹೊಂದಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕ್ಲಿಯರೆನ್ಸ್ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ