News Kannada
Saturday, April 01 2023

ಆಂಧ್ರಪ್ರದೇಶ

ಪತಿಯ ಅಕಾಲಿಕ ಅಗಲಿಕೆ ಸಹಿಸಲಾಗದೆ ಪತ್ನಿ ಮಾಡಿದ್ದೇನು ಗೊತ್ತಾ ?

Photo Credit :

ವಿಜಯವಾಡ: ಕೈ ಹಿಡಿದ ಪತಿಯನ್ನು ಹಬ್ಬಗಳ ಸಂದರ್ಭದಲ್ಲಿ ಪೂಜಿಸುವುದು ಹಿಂದೂಗಳ ಸಂಪ್ರದಾಯ. ಆದರೆ ಮಹಿಳೆಯೊಬ್ಬಳು ಅಗಲಿದ ತನ್ನ ಪತಿಗಾಗಿಯೇ ದೇವಾಲಯವೊಂದನ್ನು ಕಟ್ಟಿಸಿ ಪೂಜಿಸುತ್ತಿರುವ ಅಪರೂಪದ ವಿದ್ಯಾಮಾನ ಆಂದ್ರ ಪ್ರದೇಶದಿಂದ ವರದಿ ಆಗಿದೆ.
ಪ್ರಕಾಸಂ ಜಿಲ್ಲೆಯಲ್ಲಿ ಪದ್ಮಾವತಿ ಎನ್ನುವ ಮಹಿಳೆಯೇ ಪತಿ ಅಂಕಿರೆಡ್ಡಿ ಅವರಿಗೆ ದೇಗುಲ ನಿರ್ಮಿಸಿದ್ದಾರೆ. ತನ್ನ ತಾಯಿ ಅವರ ಪತಿಗೆ ನಮಸ್ಕರಿಸಿ, ಪೂಜೆ ಮಾಡುತ್ತಿರುವುದನ್ನು ಗಮನಿಸಿದ್ದ ಪದ್ಮಾವತಿ ಅದನ್ನು ತಮ್ಮ ಬದುಕಲ್ಲೂ ಅಳವಡಿಸಿಕೊಂಡಿದ್ದು, ಪತಿಯನ್ನು ಮರೆಯಲು ಆಗದೇ ಅವರ ಹೆಸರಿನಲ್ಲಿ ದೇಗುಲ ಕಟ್ಟಿ ಪ್ರತಿದಿನ ಪೂಜಿಸುತ್ತಿದ್ದಾರೆ. ಅಂಕಿ ರೆಡ್ಡಿ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅಂಕಿರೆಡ್ಡಿ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಪದ್ಮಾವತಿ ಅವರ ಕನಸಿನಲ್ಲಿ ಅಂಕಿರೆಡ್ಡಿ ಬಂದು ತನಗಾಗಿ ದೇವಸ್ಥಾನ ಕಟ್ಟುವಂತೆ ಹೇಳಿದ್ದನಂತೆ. ಅದಕ್ಕಾಗಿ ದೇವಸ್ಥಾನ ನಿರ್ಮಿಸಿ, ಅದರಲ್ಲಿ ಅಂಕಿರೆಡ್ಡಿ ಮೂರ್ತಿ ಪ್ರತಿಷ್ಠಾಪಿಸಿ ದಿನವೂ ಪೂಜೆ ಸಲ್ಲಿಸುತ್ತಿದ್ದಾಳೆ. ನನ್ನ ಪತಿ ಬದುಕಿದ್ದಾಗಲೂ ಅವರನ್ನು ದೇವರೆಂದೇ ಭಾವಿಸಿದ್ದೆ ಎಂದು ಪದ್ಮಾವತಿ ಹೇಳುತ್ತಾರೆ.
ಅಂಕಿರೆಡ್ಡಿಯವರ ಜನ್ಮದಿನ ಸೇರಿ ಉಳಿದ ಕೆಲವು ವಿಶೇಷ ದಿನಗಳಲ್ಲಿ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯಂದು ಬಡಜನರಿಗೆ ಊಟ ಹಾಕಲಾಗುತ್ತದೆ. ಅಂಕಿರೆಡ್ಡಿ ಸ್ನೇಹಿತ ತಿರುಪತಿ ರೆಡ್ಡಿ ಅವರೊಂದಿಗೆ ಸೇರಿ, ನನ್ನ ಮಗ ಶಿವಶಂಕರ್ ರೆಡ್ಡಿ ಈ ದೇಗುಲದ ಸೇವೆಗಳನ್ನು ಮಾಡುತ್ತಿದ್ದಾನೆ ಎಂದು ಪದ್ಮಾವತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

 

See also  13 ನೂತನ ಜಿಲ್ಲೆಗಳ ರಚನೆಗೆ ಆಂಧ್ರಪ್ರದೇಶ ಸಚಿವ ಸಂಪುಟ ಅನುಮತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು