News Kannada
Sunday, December 10 2023
ಬಿಹಾರ

ಬಿಹಾರದಲ್ಲಿ ಪತ್ರಕರ್ತನ ಕೊಲೆ: ನಾಲ್ವರ ಸೆರೆ

Four arrested for journalist's murder in Bihar
Photo Credit : News Kannada

ಪಾಟ್ನಾ: ಬಿಹಾರದ ಅರಾರಿಯಾ ಜಿಲ್ಲೆಯ ಪೊಲೀಸರು ಪತ್ರಕರ್ತರ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳನ್ನು ವಿಪಿನ್ ಯಾದವ್, ಭವೇಶ್ ಯಾದವ್, ಆಶಿಶ್ ಯಾದವ್ ಮತ್ತು ಉಮೇಶ್ ಯಾದವ್ ಎಂದು ಗುರುತಿಸಲಾಗಿದೆ. ಭವೇಶ್ ಮತ್ತು ಆಶಿಶ್ ಸಂತ್ರಸ್ತ ವಿಮಲ್ ಯಾದವ್ ಅವರ ನೆರೆಹೊರೆಯವರಾಗಿದ್ದು, ಶುಕ್ರವಾರ ಬೆಳಿಗ್ಗೆ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಂದಿದ್ದರು. ಮೃತ ಪತ್ರಕರ್ತನ ತಂದೆ ಹರೇಂದ್ರ ಯಾದವ್ ಅವರ ಹೇಳಿಕೆಯ ಮೇರೆಗೆ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 302, 120 ಬಿ ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶುಕ್ರವಾರ ರಾತ್ರಿ ಅರಾರಿಯಾ ಜಿಲ್ಲೆಯ ವಿವಿಧ ಸ್ಥಳಗಳಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸೌಪಾಲ್‌ ಜೈಲಿನಲ್ಲಿರುವ ರೂಪೇಶ್‌ ಯಾದವ್‌ ಪತ್ರಕರ್ತನ ಹತ್ಯೆಯ ಸೂತ್ರಧಾರನಾಗಿದ್ದು, ಈತ ಮೃತ ಪತ್ರಕರ್ತನ ತಮ್ಮನಾದ ಗಬ್ಬು ಯಾದವ್‌ ನನ್ನು ಕೊಂದು ಜೈಲು ಸೇರಿದ್ದ. ಈ ಪ್ರಕರಣದಲ್ಲಿ ಪತ್ರಕರ್ತ ವಿಮಲ್‌ ಗೆ ರೂಪೇಶ್‌ ಬೆದರಿಕೆಯೊಡ್ಡಿ ಮರ್ಡರ್‌ ಕೇಸ್‌ನ ಸಾಕ್ಷಿ ಹೇಳದಂತೆ ಧಮ್ಕಿ ಹಾಕುತ್ತಿದ್ದ. ಆದರೆ ವಿಮಲ್‌ ಇದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣದಿಂದ ವಿಮಲ್‌ ನ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಶೀಘ್ರದಲ್ಲಿ ರಸ್ತೆಗಿಳಿಯಲಿವೆ ಎಥನಾಲ್‌ ಇಂಧನ ವಾಹನಗಳು: ನಿತಿನ್ ಗಡ್ಕರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು