News Kannada
Friday, March 24 2023

ದೆಹಲಿ

ನವದೆಹಲಿ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನ

Former Tata Group chairman Cyrus Mistry passes away
Photo Credit : IANS

ನವದೆಹಲಿ: ಕೈಗಾರಿಕೋದ್ಯಮಿ ಮತ್ತು ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಭಾನುವಾರ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಪಟ್ಟಿದ್ದಾರೆ.

2012 ರಲ್ಲಿ ತಮ್ಮ 44 ನೇ ವಯಸ್ಸಿನಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದರು. ರತನ್ ಟಾಟಾ ಅವರ ನಂತರ ಟಾಟಾ ಸನ್ಸ್ ನ ಆರನೇ ಅಧ್ಯಕ್ಷರಾಗಿದ್ದ ಮಿಸ್ತ್ರಿ ಅವರನ್ನು ಅಕ್ಟೋಬರ್ 2016 ರಲ್ಲಿ,  ಭಿನ್ನಾಭಿಪ್ರಾಯಗಳಿಂದಾಗಿ ಆ ಸ್ಥಾನದಿಂದ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಲಾಯಿತು.

ಅವರು 19 ನೇ ಶತಮಾನದಲ್ಲಿ ಪಲ್ಲೋಂಜಿ ಮಿಸ್ತ್ರಿ ಅವರ ಅಜ್ಜನಿಂದ ಪ್ರಾರಂಭಿಸಲ್ಪಟ್ಟ ನಿರ್ಮಾಣ ಕಂಪನಿಯಾಗಿ ಪ್ರಾರಂಭವಾದ ವೈವಿಧ್ಯಮಯ ಸಮೂಹವಾದ ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಮುಖ್ಯಸ್ಥ ಪಲ್ಲೋಂಜಿ ಮಿಸ್ತ್ರಿ ಅವರ ಕಿರಿಯ ಪುತ್ರರಾಗಿದ್ದರು.

ಪಲ್ಲೋಂಜಿ ಮಿಸ್ತ್ರಿ ಅವರು ಈ ವರ್ಷದ ಜೂನ್ ನಲ್ಲಿ ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾದರು.

1968 ರಲ್ಲಿ ಜನಿಸಿದ ಮಿಸ್ತ್ರಿ, ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು ಮತ್ತು ನಂತರ ಲಂಡನ್ ಬಿಸಿನೆಸ್ ಸ್ಕೂಲ್ ನಿಂದ ಮ್ಯಾನೇಜ್ಮೆಂಟ್  ಸ್ನಾತಕೋತ್ತರ ಪದವಿಯನ್ನು ಪಡೆದರು.

ಅವರು ೧೯೯೧ ರಲ್ಲಿ ಕುಟುಂಬದ ವ್ಯವಹಾರವನ್ನು ಪ್ರವೇಶಿಸಿದರು ಮತ್ತು ಶಾಪೂರ್ಜಿ ಪಲ್ಲೊಂಜಿ & ಕಂಪನಿ ಲಿಮಿಟೆಡ್ ನ ನಿರ್ದೇಶಕರಾದರು.

ಸೈರಸ್ ಮಿಸ್ತ್ರಿ ಅವರು ೨೦೦೬ ರಲ್ಲಿ ನಿವೃತ್ತರಾದ ನಂತರ ಟಾಟಾ ಗ್ರೂಪ್ ನ ಆಡಳಿತ ಮಂಡಳಿಯಲ್ಲಿ ತಮ್ಮ ತಂದೆಯ ಸ್ಥಾನವನ್ನು ವಹಿಸಿಕೊಂಡರು. ಅವರು ಶಪೂರ್ಜಿ ಪಲ್ಲೋಂಜಿ ಗ್ರೂಪ್ನೊಂದಿಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಹಲವಾರು ಟಾಟಾ ಕಂಪನಿಗಳ ನಿರ್ದೇಶಕರಾದರು.

ಅವರು ೨೦೧೧ ರಲ್ಲಿ ಟಾಟಾ ಗ್ರೂಪ್  ಉಪಾಧ್ಯಕ್ಷರಾದರು ಮತ್ತು ನಂತರ ೨೧೨ ರಲ್ಲಿ ರತನ್ ಟಾಟಾ ಅವರ ನಿವೃತ್ತಿಯ ನಂತರ ಅಧ್ಯಕ್ಷರಾದರು.

ಆದಾಗ್ಯೂ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಅವರ ಅಧಿಕಾರಾವಧಿ ೨೦೧೬ ರಲ್ಲಿ ಇದ್ದಕ್ಕಿದ್ದಂತೆ ಕೊನೆಗೊಂಡಿತು, ಏಕೆಂದರೆ ಅವರು ಮತ್ತು ಟಾಟಾ ಕುಟುಂಬದ ನಡುವೆ ಸಮೂಹವನ್ನು ನಡೆಸುವ ಬಗ್ಗೆ ಭಿನ್ನಾಭಿಪ್ರಾಯಗಳು ಇದ್ದವು.

ಸೈರಸ್ ಮಿಸ್ತ್ರಿ ಅವರು ತಮ್ಮ ಪದಚ್ಯುತಿಯನ್ನು ಪ್ರಶ್ನಿಸಿದ್ದರು, ಮಂಡಳಿಯು ದುರಾಡಳಿತ ಮತ್ತು ಅಲ್ಪಸಂಖ್ಯಾತ ಷೇರುದಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದರು. 2018 ರಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಅವರ ಅರ್ಜಿಯನ್ನು ತಿರಸ್ಕರಿಸಿತು, ಆದರೆ ಆ ನಿರ್ಧಾರವನ್ನು 2019 ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ರದ್ದುಗೊಳಿಸಿತು.

ಆದಾಗ್ಯೂ, 2021 ರಲ್ಲಿ, ಸುಪ್ರೀಂ ಕೋರ್ಟ್ ಮಿಸ್ತ್ರಿ ಅವರ ವಜಾವನ್ನು ಎತ್ತಿಹಿಡಿದಿತ್ತು.

See also  ಗುಜರಾತ್‌: ನೂಪುರ್‌ ಶರ್ಮಾ ಬೆಂಬಲಿಸಿದವರಿಗೆ ಜೀವ ಬೆದರಿಕೆ ಕರೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು