News Kannada
Friday, June 09 2023
ದೆಹಲಿ

ಹಣ ವರ್ಗಾವಣೆ ಪ್ರಕರಣ, ಅಮಾಲ್ಗಮೇಟೆಡ್ ಕಾಫಿ ಸಂಸ್ಥೆಗೆ 1 ಕೋಟಿ ರೂ. ದಂಡ

Money laundering case: Amalgamated coffee company fined Rs 1 crore Penalty
Photo Credit : News Kannada

ಹೊಸದಿಲ್ಲಿ: 3,535 ಕೋಟಿ ರೂ. ಮೊತ್ತವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾವಣೆ ಮಾಡಿದ ಕಾರಣಕ್ಕಾಗಿ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್‌ಗೆ ಬಂಡವಾಳ ಮಾರುಕಟ್ಟೆ ನಿಯಂತ್ರಕ (ಸೆಬಿ) ಸೋಮವಾರ 1 ಕೋಟಿ ರೂ.ಗಳ ದಂಡ ವಿಧಿಸಿದೆ. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 45 ದಿನಗಳಲ್ಲಿ ದಂಡ ಮೊತ್ತವನ್ನು ಪಾವತಿಸಲು ಕಂಪನಿಗೆ ಸೂಚಿಸಿದೆ.

ಸಿಡಿಎಇಎಲ್‌ ಅಂಗಸಂಸ್ಥೆಗಳಿಂದ 3,535 ಕೋ. ರೂ. ಕಬಳಿಸಲು ಅನುವು ಮಾಡಿಕೊಟ್ಟ ಪ್ರಕ್ರಿಯೆ ಅಲ್ಲದೆ ಬೇರೆ ಏನೂ ಅಲ್ಲ ಎಂದು ಸೆಬಿ ಸ್ಪಷ್ಟವಾಗಿ ಹೇಳಿದೆ.

ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ ಮತ್ತು ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಅನ್ನು ಸಿದ್ದಾರ್ಥ ಕುಟುಂಬ ಸದಸ್ಯರು ನಿರ್ವಹಿಸುತ್ತಿದ್ದಾರೆ. ವಿಜಿಎಸ್‌ನ ಮರಣದ ತನಕ ಹೂಡಿಕೆದಾರರಿಗೆ ಇಂತಹ ಹಣ ಹಸ್ತಾಂತರಿಸಿರುವ ವಿಚಾರವನ್ನು ತಿಳಿಸಿರಲಿಲ್ಲ ಎಂದು ಸೆಬಿ ಹೇಳಿದೆ.

ಈ ನಿಟ್ಟಿನಲ್ಲಿ ಸೆಬಿ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್‌ಗೆ 1 ಕೋಟಿ ರೂ. ದಂಡ ವಿಧಿಸಿದೆ. ಕಾಫಿ ಡೇ ಗ್ರೂಪ್‌ನ ಅಧ್ಯಕ್ಷರಾಗಿದ್ದ ವಿಜಿ ಸಿದ್ಧಾರ್ಥ ಅವರು ಜುಲೈ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸೂಸೈಡ್ ನೋಟ್ನಲ್ಲಿ ಕಂಪನಿಯು ಸಾಲದಲ್ಲಿರುವುದನ್ನು ವಿವರಿಸಿದ್ದರು. ಸಿದ್ಧಾರ್ಥ ಅವರ ನಿಧನದ ನಂತರ, ಸಿಬಿಐ ಕಂಪನಿ ವಿರುದ್ಧ ತನಿಖೆ ನಡೆಸಿದ್ದನ್ನು ಗಮನಿಸಬಹುದು.

See also  ನಾಲ್ವರು ತಮಿಳುನಾಡು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು