ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೀತಿ ಆಯೋಗದ 8 ನೇ ಆಡಳಿತ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕನ್ವೆನ್ಷನ್ ಸೆಂಟರ್ನಲ್ಲಿ ಸಭೆ ನಡೆಯುತ್ತಿದೆ.
ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಅಮಿತ್ ಶಾ, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವು ಕೇಂದ್ರ ಸಚಿವರು ಪಾಲ್ಗೊಂಡಿದ್ದಾರೆ.
ಮುಖ್ಯಮಂತ್ರಿಗಳಾದ ಸುಖವಿಂದರ್ ಸಿಂಗ್ ಸುಖು (ಹಿಮಾಚಲ ಪ್ರದೇಶ), ಭೂಪೇಶ್ ಬಾಘೇಲ್ (ಛತ್ತೀಸ್ಗಢ), ಯೋಗಿ ಆದಿತ್ಯನಾಥ್ (ಉತ್ತರ ಪ್ರದೇಶ), ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ಪುಷ್ಕರ್ ಸಿಂಗ್ ಧಾಮಿ (ಉತ್ತರಾಖಂಡ), ಪೆಮಾ ಖಂಡು (ಅರುಣಾಚಲ ಪ್ರದೇಶ) , ಮಾಣಿಕ್ ಸಹಾ (ತ್ರಿಪುರ), ಮನೋಹರ್ ಲಾಲ್ ಖಟ್ಟರ್ (ಹರಿಯಾಣ), ಭೂಪೇಂದ್ರ ಪಟೇಲ್ (ಗುಜರಾತ್), ಪ್ರಮೋದ್ ಸಾವಂತ್ (ಗೋವಾ), ಕಾನ್ರಾಡ್ ಸಂಗ್ಮಾ (ಮೇಘಾಲಯ), ಏಕನಾಥ್ ಶಿಂಧೆ (ಮಹಾರಾಷ್ಟ್ರ), ಹೇಮಂತ್ ಸೊರೆನ್ (ಜಾರ್ಖಂಡ್), ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ( ಆಂಧ್ರ ಪ್ರದೇಶ) ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳದ ಮುಖ್ಯಮಂತ್ರಿಗಳು:
ಒಟ್ಟು ಎಂಟು ಮುಖ್ಯಮಂತ್ರಿಗಳು: ಅರವಿಂದ್ ಕೇಜ್ರಿವಾಲ್ (ದೆಹಲಿ), ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಭಗವಂತ್ ಮಾನ್ (ಪಂಜಾಬ್), ನಿತೀಶ್ ಕುಮಾರ್ (ಬಿಹಾರ), ಕೆ. ಚಂದ್ರಶೇಖರ ರಾವ್ (ತೆಲಂಗಾಣ), ಎಂ.ಕೆ. ಸ್ಟಾಲಿನ್ (ತಮಿಳುನಾಡು), ಅಶೋಕ್ ಗೆಹ್ಲೋಟ್ (ರಾಜಸ್ಥಾನ) ಮತ್ತು ಪಿಣರಾಯಿ ವಿಜಯನ್ (ಕೇರಳ) ಸಭೆಯಲ್ಲಿ ಪಾಲ್ಗೊಂಡಿಲ್ಲ.