News Kannada
Monday, December 11 2023
ಜಮ್ಮು-ಕಾಶ್ಮೀರ

ಶ್ರೀನಗರದಲ್ಲಿ ಹೆದ್ದಾರಿ ಕುಸಿತ: ಹಣ್ಣು ಹೊತ್ತ ಟ್ರಕ್‌ ಗಳು ರಸ್ತೆಯಲ್ಲಿಯೇ ಬಾಕಿ

Highway collapses in Srinagar
Photo Credit : News Kannada

ಜಮ್ಮು: ಬನಿಹಾಲ್ ಬಳಿಯ ಶಾಲ್ಗ್ರಿಯಲ್ಲಿ ಭೂಕುಸಿತದಿಂದಾಗಿ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. “ಶಾಲ್ಗ್ರಿ, ಬನಿಹಾಲ್‌ನಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಎನ್‌ಎಚ್‌ಡಬ್ಲ್ಯೂನಲ್ಲಿ ಎರಡೂ ಬದಿಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರು, ಯಂತ್ರೋಪಕರಣಗಳ ಮೂಲಕ ಭೂಕುಸಿತವಾದಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರ ಕಣಿವೆಯ ಜೀವನಾಡಿ ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪರ್ಕವಾಗಿದೆ.

ಅಗತ್ಯ ಸಾಮಗ್ರಿಗಳನ್ನು ಹೊತ್ತ ಕಾಶ್ಮೀರಕ್ಕೆ ಹೋಗುವ ಟ್ರಕ್‌ಗಳು ಮತ್ತು ಇತರ ವಾಹನಗಳು ಇದೇ ಹೆದ್ದಾರಿಯ ಮೂಲಕ ಹಾದು ಹೋಗುತ್ತವೆ ಮತ್ತು ಕಾಶ್ಮೀರದಿಂದ ದೇಶದ ಉಳಿದ ಭಾಗಗಳಿಗೆ ಹಣ್ಣು ಸಾಗಿಸುವ ಟ್ರಕ್‌ಗಳು ಈ ರಸ್ತೆಯ ಮೂಲಕ ಹೋಗುತ್ತವೆ.

See also  ಜಮ್ಮು-ಕಾಶ್ಮೀರ: ಎಲ್ಇಟಿ ಉಗ್ರನ ಎನ್‌ಕೌಂಟರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು