News Karnataka Kannada
Wednesday, April 17 2024
Cricket
ಕೇರಳ

ಕಣ್ಣೂರು: ರೈಲು ಬೋಗಿ ಬೆಂಕಿಗಾಹುತಿ ಪ್ರಕರಣ, ಓರ್ವ ಸೆರೆ

Uttar Pradesh: Three killed as truck rams into dhaba
Photo Credit : Pixabay

ಕಣ್ಣೂರು: ಕಣ್ಣೂರು ರೈಲು ನಿಲ್ದಾಣದಲ್ಲಿ ಜೂ. 1ರಂದು ಮುಂಜಾನೆ ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಸ್ಥಳದ ಪಕ್ಕದ ಬಿಪಿಸಿಎಲ್ ದಾಸ್ತಾನು ಕೇಂದ್ರದ ಸಿಸಿಟಿವಿಯಲ್ಲಿ ಪತ್ತೆಯಾದ ದೃಶ್ಯದ ಜಾಡು ಹಿಡಿದು ಈತನನ್ನು ಬಂಧಿಸಲಾಗಿದೆ.‌ ಈತ ತನ್ನ ಹೆಸರನ್ನು ಪುಶಂಜಿತ್‌ ಸಿದ್ಗರ್‌, ಪ್ರಾಯ 40 ವರ್ಷ ಎಂದು ಹೇಳಿಕೊಂಡಿದ್ದಾನೆ.

ತನಿಖಾ ತಂಡ ಆತನನ್ನು ಸಮಗ್ರವಾಗಿ ವಿಚಾರಣೆ ನಡೆಸುತ್ತಿದೆ. ಡಿವೈಎಸ್ಪಿ ಮ್ಯಾಥ್ಯೂ ರಾಜ್ ಕಲ್ಲಕಾಟ್ ಅವರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೈಲಿನಲ್ಲಿ ಸಿಕ್ಕಿದ ಬೆರಳಚುಗಳೊಂದಿಗೆ ಈತನ ಬೆರಳಚ್ಚು ಹೋಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನ ಹಿನ್ನೆಲೆ ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು