ತಿರುವನಂತಪುರಂ: ಪುರಾಣ ಪ್ರಸಿದ್ದ ಶಬರಮಲೆ ಜ್ಯೋತಿ ಗೋಚರಿಸುವ ಅರಣ್ಯ ಪ್ರದೇಶ ಪೊನ್ನಂಬಲ ಮೇಡುವಿನಲ್ಲಿ ತಮಿಳುನಾಡಿನ ಅರ್ಚಕರೊಬ್ಬರು ಇತ್ತೀಚೆಗೆ ನಡೆಸಿದ ಪೂಜೆಯ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರದೊಳಗೆ ವರದಿ ನೀಡುವಂತೆ ಕೇಳಿದೆ. ಈ ಬಗ್ಗೆ ವರದಿ ನೀಡುವಂತೆ ಪೊಲೀಸರು ಮತ್ತು ಅರಣ್ಯ ಇಲಾಖೆಯನ್ನು ದೇವಸ್ವಂ ಬೋರ್ಡ್ ಸೂಚಿಸಿದೆ.
ಅಲ್ಲದೆ ಕೃತ್ಯದ ವಿರುದ್ಧ ಸ್ಥಳೀಯ ಕೇರಳ ಅರಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಸ್ಥಾನದ ಪೊನಂಬಲಂ ಪ್ರದೇಶದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಆರು ಸದಸ್ಯರಲ್ಲಿ ಒಬ್ಬರಾದ ನಾರಾಯಣನ್ ಪೂಜಾ ವಿಧಿ ನಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಹಿಂದೆ ನಾರಾಯಣನ್ ಅವರು ದೇವಸ್ಥಾನದ ಅರ್ಚಕರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ. ಪೊನಂಬಲಂ ಅರಣ್ಯ ಪ್ರದೇಶವು ಕೇರಳ ಅರಣ್ಯ ಇಲಾಖೆ ನಿಯಂತ್ರಣದಲ್ಲಿದೆ. ದಟ್ಟಾರಣ್ಯದ ನಡುವೆ ಇರುವ ಪೊನ್ನಂಬಲ ಪ್ರದೇಶಕ್ಕೆ ನಾರಾಯಣನ್ ಇತರರು ಹೇಗೆ ಪ್ರವೇಶ ಪಡೆದರು ಎಂಬುದು ಸ್ಯದ್ಯ ಮೂಡಿರುವ. ಪ್ರಶ್ನೆ ಅತಿಭದ್ರತೆಯ ಅರಣ್ಯ ಪ್ರದೇಶ ಮತ್ತು ಪೌರಾಣಿಕ ಪ್ರದೇಶದಲ್ಲಿ ಪೂಜೆ ನಡೆಸಲು ಹೇಗೆ ಅವಕಾಶ ನೀಡಲಾಯಿತು ಎಂಬುದರ ಬಗ್ಗೆ ವಿವರ ನೀಡುವಂತೆ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸೂಚಿಸಲಾಗಿದೆ.