News Karnataka Kannada
Saturday, April 20 2024
Cricket
ಕೇರಳ

ಶಬರಿಮಲೆ ಜ್ಯೋತಿ ತೋರುವ ಪೊನ್ನಂಬಲ ಮೇಡುವಿನಲ್ಲಿ ಪೂಜೆ: ವರದಿಗೆ ದೇವಸ್ವಂ ಬೋರ್ಡ್‌ ಸೂಚನೆ

Puja at Ponnambala Medu where Sabarimala Jyoti is lit: Devaswa Board notice for report
Photo Credit : IANS

ತಿರುವನಂತಪುರಂ: ಪುರಾಣ ಪ್ರಸಿದ್ದ ಶಬರಮಲೆ ಜ್ಯೋತಿ ಗೋಚರಿಸುವ ಅರಣ್ಯ ಪ್ರದೇಶ ಪೊನ್ನಂಬಲ ಮೇಡುವಿನಲ್ಲಿ ತಮಿಳುನಾಡಿನ ಅರ್ಚಕರೊಬ್ಬರು ಇತ್ತೀಚೆಗೆ ನಡೆಸಿದ ಪೂಜೆಯ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರದೊಳಗೆ ವರದಿ ನೀಡುವಂತೆ ಕೇಳಿದೆ. ಈ ಬಗ್ಗೆ ವರದಿ ನೀಡುವಂತೆ ಪೊಲೀಸರು ಮತ್ತು ಅರಣ್ಯ ಇಲಾಖೆಯನ್ನು ದೇವಸ್ವಂ ಬೋರ್ಡ್‌ ಸೂಚಿಸಿದೆ.

ಅಲ್ಲದೆ ಕೃತ್ಯದ ವಿರುದ್ಧ ಸ್ಥಳೀಯ ಕೇರಳ ಅರಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಸ್ಥಾನದ ಪೊನಂಬಲಂ ಪ್ರದೇಶದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಆರು ಸದಸ್ಯರಲ್ಲಿ ಒಬ್ಬರಾದ ನಾರಾಯಣನ್ ಪೂಜಾ ವಿಧಿ ನಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಹಿಂದೆ ನಾರಾಯಣನ್ ಅವರು ದೇವಸ್ಥಾನದ ಅರ್ಚಕರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ. ಪೊನಂಬಲಂ ಅರಣ್ಯ ಪ್ರದೇಶವು ಕೇರಳ ಅರಣ್ಯ ಇಲಾಖೆ ನಿಯಂತ್ರಣದಲ್ಲಿದೆ. ದಟ್ಟಾರಣ್ಯದ ನಡುವೆ ಇರುವ ಪೊನ್ನಂಬಲ ಪ್ರದೇಶಕ್ಕೆ ನಾರಾಯಣನ್ ಇತರರು ಹೇಗೆ ಪ್ರವೇಶ ಪಡೆದರು ಎಂಬುದು ಸ್ಯದ್ಯ ಮೂಡಿರುವ. ಪ್ರಶ್ನೆ ಅತಿಭದ್ರತೆಯ ಅರಣ್ಯ ಪ್ರದೇಶ ಮತ್ತು ಪೌರಾಣಿಕ ಪ್ರದೇಶದಲ್ಲಿ ಪೂಜೆ ನಡೆಸಲು ಹೇಗೆ ಅವಕಾಶ ನೀಡಲಾಯಿತು ಎಂಬುದರ ಬಗ್ಗೆ ವಿವರ ನೀಡುವಂತೆ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸೂಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು