ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಲವ್ ಜಿಹಾದ್ ಆಧಾರಿತ ಹಿಂದಿ ಚಲನಚಿತ್ರ “ದಿ ಕೇರಳ ಸ್ಟೋರಿ” ಅನ್ನು ಟೀಕಿಸಿದ್ದಾರೆ, ಇದು ರಾಜಕೀಯ ಲಾಭಕ್ಕಾಗಿ “ಸಂಘ ಪರಿವಾರದ ಪ್ರಚಾರ” ದ ಭಾಗ ಎಂದು ಹೇಳಿದ್ದಾರೆ.
ವಿಜಯನ್ ಭಾನುವಾರ ಫೇಸ್ಬುಕ್ ಪೋಸ್ಟ್ನಲ್ಲಿ, ಕೇರಳವನ್ನು ರಾಕ್ಷಸ ಕೃತ್ಯಗಳ ನಾಡು ಎಂದು ಬಿಂಬಿಸಲು ಇಂತಹ ಚಲನಚಿತ್ರ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. “ಕೇರಳ ಜಾತ್ಯತೀತ ಭೂಮಿಯನ್ನು ಭಯೋತ್ಪಾದಕರ ಹಾಟ್ ಸ್ಪಾಟ್ ಎಂದು ಬಿಂಬಿಸುವ ಯತ್ನವನ್ನು ಟ್ರೇಲರ್ನಲ್ಲಿ ಕಂಡುಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ. ಕೇರಳದಲ್ಲಿ ರಾಜಕೀಯ ಲಾಭಕ್ಕಾಗಿ ಸಂಘಪರಿವಾರ ನಡೆಸುತ್ತಿರುವ ವಿವಿಧ ಪ್ರಯತ್ನಗಳಲ್ಲಿ ಚಲಚಿತ್ರವೂ ಒಂದು ಎಂದು ಅವರು ಹೇಳಿದ್ದಾರೆ.
ಸಿನಿಮಾದ ಪ್ರಮುಖ ವಿಷಯವಾದ ಲವ್ ಜಿಹಾದ್ ಒಂದು ಕಲ್ಪಿತ ಪಿತೂರಿಯಾಗಿದ್ದು, ಲವ್ ಜಿಹಾದ್ ವಾದವನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯವೂ ತಿರಸ್ಕರಿಸಿದೆ ಎಂದು ವಿವರಿಸಿದ್ದಾರೆ.