ಭೋಪಾಲ್: ವಿವಾದಿತ ಚಲನಚಿತ್ರ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರೊಂದಿಗೆ ಹೋಗಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಈ ಯುವತಿ ಹಿಂದೊಮ್ಮೆ ಮುಸ್ಲಿಂ ಸ್ನೇಹಿತನೊಂದಿಗೆ ಮನೆಯಿಂದ ಓಡಿ ಹೋಗಿದ್ದು, ಆ ವೇಳೆ 70,000 ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಳು. ಈ ವೇಳೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಠಾಕೂರ್ ಸಹಾಯ ಪಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆಕೆಯನ್ನು ಪತ್ತೆಹಚ್ಚಿ ಮರಳಿ ಮನೆಗೆ ಕರೆತರಲಾಗಿತ್ತು. ಈ ನಿಟ್ಟಿನಲ್ಲಿ ಯುವತಿಗೆ ಲವ್ ಜಿಹಾದ್ ಕುರಿತು ಪಾಠ ಹೇಳುತ್ತೇನೆಂದು ಸಂಸದರು ಆಕೆ ಸೇರಿದಂತೆ ಕೆಲ ಯುವತಿಯರನ್ನು ಚಲನಚಿತ್ರ ವೀಕ್ಷಿಸಲು ಕರೆದು ಕೊಂಡು ಹೋಗಿದ್ದರು.
ಆದರೆ ಈಗ ಮತ್ತೆ ಆಕೆ ಕಾಣೆಯಾಗಿರುವುದು ಮನೆ ಮಂದಿಯಲ್ಲಿ ಆತಂಕ ಮೂಡಿದೆ. ಕುಟುಂಬದವರು ಕಾಣೆಯಾಗಿರುವ ದೂರನ್ನು ದಾಖಲಿಸಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ, ಬಾಲಕಿ ಪತ್ತೆಯಾದ ನಂತರ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಮಲಾನಗರ ಪೊಲೀಸ್ ಠಾಣೆಯ ಪ್ರಭಾರಿ ಅನಿಲ್ ಬಾಜಪೇಯಿ ತಿಳಿಸಿದ್ದಾರೆ.
ನರ್ಸಿಂಗ್ ಶಾಲೆಯಲ್ಲಿ ತನ್ನ ಸಹಪಾಠಿಯಾಗಿದ್ದ ಎಂಬ ಕ್ರಿಮಿನಲ್ ಇತಿಹಾಸ ಹೊಂದಿದ ಯುವಕನೊಂದಿಗೆ ಯೂಸುಫ್ ಖಾನ್ ಆಕೆ ಮತ್ತೊಮ್ಮೆ ಪರಾರಿಯಾಗಿರಬಹುದು ಎಂದು ಮನೆಯವರು ಶಂಕಿಸಿದ್ದಾರೆ. .