ಚೆನ್ನೈ: ಕರ್ನಾಟಕದಲ್ಲಿ ಅಮುಲ್ ತನ್ನ ಮಾರುಕಟ್ಟೆ ಹೆಚ್ಚಿಸಲು ಹೊರಟ ವೇಳೆ ವಿವಾದ ಏರ್ಪಟ್ಟಿತ್ತು. ಅದೇ ರೀತಿ ಈಗ ತಮಿಳುನಾಡಿನಲ್ಲಿ ತನ್ನ ಮಾರುಕಟ್ಟೆ, ಖರೀದಿ ಹೆಚ್ಚಿಸಲು ಹೊರಟಿರುವ ಅಮುಲ್ಗೆ ವಿರೋಧ ಎದುರಾಗಿದೆ. ಪಿಎಂಕೆ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಡಾ.ಅನ್ಬುಮಣಿ ರಾಮದಾಸ್ ಅವರು ಗುರುವಾರ ಆವಿನ್ನ ಹಾಲು ಸಂಗ್ರಹಣೆ ದರವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಮುಲ್ ತಮಿಳುನಾಡು ಪ್ರವೇಶ ತಡೆಯಲು ಈ ಒತ್ತಾಯ ಮಾಡಿದ್ದಾರೆ. ತಮಿಳುನಾಡಿನ ಹಾಲಿನ ಮಾರುಕಟ್ಟೆಯಲ್ಲಿ ಆವಿನ್ ಶೇ.16 ರಷ್ಟು ಪಾಲು ಹೊಂದಿದ್ದು, ಅಮುಲ್ ನಿಂದ ಬೆದರಿಕೆ ಎದುರಿಸುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಅದರ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಪಿಎಂಕೆ ನಾಯಕ ಆವಿನ್ ಒಕ್ಕೂಟವನ್ನು ಒತ್ತಾಯಿಸಿದರು. ಗುಜರಾತ್ ಮೂಲದ ಅಮುಲ್ ತಮಿಳುನಾಡು ಮಾರುಕಟ್ಟೆ ಪ್ರವೇಶಿಸಲು ಚಿಂತಿಸಿದೆ. ಇದಕ್ಕಾಗಿ ಆಂಧ್ರ-ತಮಿಳುನಾಡು ಗಡಿಯಲ್ಲಿ ಸ್ಥಾವರವನ್ನು ಸ್ಥಾಪಿಸಿದೆ.
ರಾಷ್ಟ್ರೀಯ ಹಾಲು ಸಹಕಾರ ಸಂಘವು ಸೇಲಂ, ಈರೋಡ್ ಮತ್ತು ತಿರುವಣ್ಣಾಮಲೈನಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದೆ ಮತ್ತು ಪ್ರತಿ ಲೀಟರ್ಗೆ 50 ಪೈಸೆ ದರದಲ್ಲಿ ಖರೀದಿ ಏಜೆಂಟರಿಗೆ ತಕ್ಷಣ ಪಾವತಿಸಿದೆ.