ಚೆನ್ನೈ: ರಾಷ್ಟ್ರ ರಾಜಧಾನಿಯ ಹೊಸ ಸಂಸತ್ ಭವನದಲ್ಲಿ ಇಡಲಾಗುವ ರಾಜದಂಡ ಸೆಂಗೋಲ್ ಕುರಿತು ಕಾಂಗ್ರೆಸ್ನ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ‘ಮಠ’ದ ಮಠಾಧೀಶರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೆಂಗೋಲ್ ಅನ್ನು 1947 ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು ಮತ್ತು ಇದು ತಮಿಳುನಾಡಿನ ಹೆಮ್ಮೆ ಹೇಳಿದ್ದಾರೆ.
ಶುಕ್ರವಾರದಂದು, “ಸೆಂಗೊಲ್” ಬಗ್ಗೆ “ಸುಳ್ಳು ನಿರೂಪಣೆ” ಹರಡಿದೆ ಎಂದು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು. ಲಾರ್ಡ್ ಮೌಂಟ್ ಬ್ಯಾಟನ್, ಸಿ. ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರು ಸೆಂಗೊಲ್ ಬಗ್ಗೆ ವಿವರಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲಿತ ಪುರಾವೆಗಳಿಲ್ಲ ಎಂದು ಹೇಳಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ತಿರುವವುಡುತುರೈ ಅಧೀನಂ (ಮಠ)ದ ಮಠಾಧೀಶರು, “ಕೆಲವರು ಹಬ್ಬಿಸುತ್ತಿರುವ ಸುಳ್ಳುಗಳಿಂದ ನಾವು ನಿರಾಶೆಗೊಂಡಿದ್ದೇವೆ, ಇದು ತಮಿಳುನಾಡಿಗೆ ದೊಡ್ಡ ಹೆಮ್ಮೆಯಾಗಿದೆ, ಸೆಂಗೋಲ್ ಚೋಳರ ನಾಡು ತಿರುವವುಡುತುರೈ ಅಧೀನಂನಿಂದ ಕೊಂಡು ಹೋಗಲಾಗಿತ್ತು. “ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸೆಂಗೋಲ್ ಸ್ವೀಕರಿಸಲಿದ್ದಾರೆ. ಹೊಸ ಸಂಸತ್ತಿನ ಕಟ್ಟಡದಲ್ಲಿ ಇದನ್ನು ಸ್ಥಾಪಿಸಲಾಗುವುದು. ಇದು ನಮಗೆ ಸಂತೋಷ ತಂದಿದೆ. ನಮ್ಮನ್ನು ದೆಹಲಿಗೆ ಆಹ್ವಾನಿಸಲಾಗಿದೆ ಮತ್ತು ನಾವು ಅಲ್ಲಿಗೆ ಹೋಗುತ್ತೇವೆ” ಎಂದು ಅವರು ಹೇಳಿದರು. ಅದೇ ಸೆಂಗೋಲ್ ಅನ್ನು ಹಲವು ವರ್ಷಗಳಿಂದ ಮರೆಮಾಡಲಾಗಿತ್ತು ಎಂದು ತಿರುವವುಡುತುರೈ ಅಧೀನಂ ಮಠಾಧೀಶರು ಹೇಳಿದರು.
ಈಗ ಅದನ್ನು ಮತ್ತೆ ಬೆಳಕಿಗೆ ತರಲಾಗುತ್ತಿದೆ, ಹೊಸ ಸಂಸತ್ತಿನ ಉದ್ಘಾಟನೆಯ ಬಗ್ಗೆ 1-2 ತಿಂಗಳ ಹಿಂದೆ ನಮಗೆ ತಿಳಿಸಲಾಯಿತು.
“1947 ರಲ್ಲಿ ದಿವಂಗತ ಪಿಎಂ ಜವಾಹರಲಾಲ್ ನೆಹರು ಅವರಿಗೆ ಸೆಂಗೋಲ್ ನೀಡಲಾಯಿತು. ರಾಜಾಜಿ (ಸಿ ರಾಜಗೋಪಾಲಾಚಾರಿ) ಸ್ವಾತಂತ್ರ್ಯ ಮತ್ತು ಭಾರತದ ಸ್ವಾತಂತ್ರ್ಯವನ್ನು ಹೇಗೆ ಸಂಕೇತಿಸಬೇಕೆಂದು ಕೇಳಿದರು. ಆ ಸಮಯದಲ್ಲಿ ನಮ್ಮ ಪ್ರಧಾನ ಮಠಾಧೀಶರು ಸೆಂಗೋಲ್ ಮಾಡಲು ವುಮ್ಮಿಡಿ ಬಂಗಾರು ಜ್ಯುವೆಲರ್ಸ್ಗೆ ಕೇಳಿಕೊಂಡಿದ್ದರು ಎಂದು ತಿರುವಾವುಡುತುರೈ ಅಧೀನಂ ಮಠಾಧೀಶರು ಹೇಳಿದ್ದಾರೆ.
“ಸೆಂಗೊಲ್ ಅನ್ನು ದೆಹಲಿಗೆ ವಿಮಾನದಲ್ಲಿ ಕಳುಹಿಸಲಾಯಿತು ಮತ್ತು ಅದನ್ನು ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ನೀಡಲಾಯಿತು. ನಂತರ ಅದನ್ನು ಅಧೀನಂ ಮಠಾಧೀಶರು ಆಗಿನ ಪಿಎಂ ನೆಹರೂಗೆ ಹಸ್ತಾಂತರಿಸಿದರು” ಎಂದು ಅವರು ಮಠಾಧೀಶರು ಹೇಳಿದ್ದಾರೆ.