News Kannada
Friday, March 24 2023

ತೆಲಂಗಾಣ

ತೆಲಂಗಾಣ: ತಂದೆ ಮಗನ ಜೀವ ಬಲಿಪಡೆದ ಹುಟ್ಟುಹಬ್ಬ ಆಚರಣೆ

Photo Credit :

ಖಮ್ಮಂ (ತೆಲಂಗಾಣ) : ಶಾಲೆಯಲ್ಲಿ ಮಗ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದ ಕಾರಣದಿಂದಾಗಿ ಆತನ ಜತೆ ಅಪ್ಪನೂ ಶವವಾಗಬೇಕಾಗಿ ಬಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಸಾಯಿ ಭಾನುಪ್ರಕಾಶ್​​ ಎಂಬ ವಿದ್ಯಾರ್ಥಿ ತನ್ನ ಜನ್ಮದಿನವನ್ನು ಸ್ನೇಹಿತರ ಜತೆಗೆ ಆಚರಿಸಿಬೇಕು ಎಂದುಕೊಂಡ. ಆದರೆ ಆತ ಕಾರ್ಯಕ್ರಮವನ್ನು ತನ್ನ ಮನೆಯಲ್ಲಿ ಅಥವಾ ಇನ್ನಾವುದೇ ಹಾಲ್‌ಗಳಲ್ಲಿ ಇಟ್ಟುಕೊಂಡಿದ್ದರೆ ಇಂಥದ್ದೊಂದು ಅನಾಹುತ ನಡೆಯುತ್ತಲೇ ಇರಲಿಲ್ಲ. ಆದರೆ ವಿಧಿಯಾಟವೇ ಬೇರೆಯಾಗೋಯ್ತು. ಸ್ನೇಹಿತರ ಜತೆ ಶಾಲೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ನಿರ್ಧಾರ ಮಾಡಿದ. ಆತನ ಸ್ನೇಹಿತರು ಕೂಡ ಅಲ್ಲಿಯೇ ಆಚರಿಸಿಕೊಳ್ಳುವಂತೆ ಹೇಳಿದರು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾನುಪ್ರಕಾಶ್‌ ವಿರುದ್ಧ ಆತನ ಶಿಕ್ಷಕರು ಕೆಂಡಾಮಂಡಲವಾದರು. ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದ ಕಾರಣ, ಆತನ ಜತೆ ಆತನ ತಂದೆಯನ್ನೂ ಮನಬಂದಂತೆ ಹೀಯಾಳಿಸಿದರು ಈ ಶಿಕ್ಷಕ. ಸಾಲದು ಎಂಬುದಕ್ಕೆ ಆತನನ್ನು ಶಾಲೆಯಿಂದ ವಾರದ ಮಟ್ಟಿಗೆ ಅಮಾನತು ಮಾಡಲಾಯಿತು. ತಂದೆ ಚಲ್ಲಾ ರಾಮ್‌ಬಾಬು ಅವರನ್ನೂ ಕರೆಯಿಸಿ ಅವಮಾನ ಮಾಡಲಾಯಿತು.

ಇದರಿಂದ ತೀವ್ರವಾಗಿ ಮನನೊಂದುಕೊಂಡ ಬಾಲಕ ಭಾನುಪ್ರಕಾಶ್‌, ಮನೆಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕಲಿಲ್ಲ. ಆಸ್ಪತ್ರೆಯಲ್ಲಿ ಅಸುನೀಗಿದ. ಮಗನ ಸಾವಿನ ದುಃಖ ತಾಳಲಾರದೇ ಅಪ್ಪ ಚಲ್ಲಾ ರಾಮ್‌ಬಾಬು ಅವರು ನೇಣಿಗೆ ಶರಣಾದರು.

ಶಾಲೆಯಲ್ಲಿ ಮಾಡಿಕೊಂಡ ಒಂದು ಹುಟ್ಟುಹಬ್ಬ ಎರಡು ಜೀವವನ್ನು ಬಲಿಪಡೆಯಿತು. ಶಿಕ್ಷಕರ ತಪ್ಪಿನಿಂದ ಅಮಾಯಕ ಎರಡು ಜೀವಗಳು ಹೋದುದ್ದಕ್ಕೆ ಯಾರು ಹೊಣೆ ಎಂದು ಇದೀಗ ಶಾಲೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರು ಈ ಕುರಿತಂತೆ ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

See also  ಹೆಂಡತಿ ಮೇಲೆ ಅನುಮಾನ: ಪತ್ನಿಯನ್ನು ಅಮಾನುಷವಾಗಿ ಕೊಂದ ಪತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು