ಹೈದರಾಬಾದ್: ಬೀದಿ ನಾಯಿಗಳ ದಾಳಿಯಿಂದ 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಹನಮಕೊಂಡ ಜಿಲ್ಲೆಯ ಕಾಜಿಪೇಟ್ ರೈಲ್ವೆ ಕ್ವಾರ್ಟರ್ಸ್ ಬಳಿ ಈ ಘಟನೆ ನಡೆದಿದೆ.
ಮರದ ಕೆಳಗೆ ಏಕಾಂಗಿಯಾಗಿ ಮಲಗಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿತು. ಅಸಹಾಯಕ ಹುಡುಗ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದನು.
ಮೃತನನ್ನು ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಮಗ ಚೋಟು ಎಂದು ಗುರುತಿಸಲಾಗಿದೆ. ಕುಟುಂಬವು ಗುರುವಾರ ರಾತ್ರಿ ಕಾಜಿಪೇಟ್ ರೈಲ್ವೆ ನಿಲ್ದಾಣಕ್ಕೆ ಬಂದು ಹತ್ತಿರದ ಉದ್ಯಾನವನದಲ್ಲಿ ಮಲಗಿತ್ತು. ಬಾಲಕನ ಪೋಷಕರು ಮಗುವನ್ನು ಬಿಟ್ಟು ಬಹಿರ್ದಸೆಗೆ ಹೋಗಿದ್ದರು.
ಅವರು ಹಿಂದಿರುಗಿದಾಗ, ಹುಡುಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಪೋಷಕರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅವನು ಅದಾಗಲೇ ಸಾವನ್ನಪ್ಪಿದ್ದನು.
ಸರ್ಕಾರದ ಮುಖ್ಯ ಸಚೇತಕ ವಿನಯ್ ಭಾಸ್ಕರ್ ಮತ್ತು ಮೇಯರ್ ಗುಂಡು ಸುಧಾರಾಣಿ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದರು.