ಅದಿಲಾಬಾದ್, ಮೇ.21: ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬಾಬಾಪುರ ಗ್ರಾಮದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಮೇ 19ರಂದು ಬಾಲಕನ ಹುಟ್ಟುಹಬ್ಬವಿದ್ದು, ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಳಿಕ ಬಾಲಕನ ಪೋಷಕರು ಶವವನ್ನು ಮನೆಗೆ ತಂದರು. ಶುಕ್ರವಾರ ಗಂಟೆ ೧೨ ಗಂಟೆ ಆದ ಕೂಡಲೇ ಅವರು ಅವರ ಜನ್ಮದಿನವನ್ನು ಆಚರಿಸಿದ್ದಾರೆ. ಬಾಲಕನ ಪೋಷಕರಾದ ಗುಣವಂತ್ ರಾವ್ ಮತ್ತು ಲಲಿತಾ ಮತ್ತು ಸಂಬಂಧಿಕರು ಕೇಕ್ ಸಿದ್ಧಪಡಿಸಿ ಬಾಲಕನ ಶವದ ಪಕ್ಕದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಬಾಲಕನ ಅಂತ್ಯಸಂಸ್ಕಾರವನ್ನು ಶುಕ್ರವಾರ ನಡೆಸಲಾಯಿತು. ಮಗನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ನಾವು ಅವನನ್ನು ಮಂಚೇರಿಯಲ್ ಆಸ್ಪತ್ರೆಗೆ ದಾಖಲಿಸಿದ್ದೇವು ಆದರೆ ವಿಧಿಯಾಟ ಅವನು ಬದುಕುಳಿಯಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಸಮರ್ಥಿಸಿಕೊಂಡಿದ್ದಾರೆ.