ಲಖಿಂಪುರ್ ಖೇರಿ : ತನ್ನ ಮಗನ ಹುಟ್ಟುಹಬ್ಬವನ್ನು ಆಚರಣೆ ಮಾಡುವಾಗ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ತಾಯಿ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.ಅನಿತಾ ವರ್ಮಾ (28) ಮೃತಪಟ್ಟವರು.
ಪ್ರದೀಪ್ ವರ್ಮಾ ಎನ್ನುವ ರೈತರೊಬ್ಬರ ಪತ್ನಿಯಾಗಿರುವ ಅನಿತಾ ವರ್ಮಾ ತಮ್ಮ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಅದ್ಧೂರಿಯಾಗಿ ಆಯೋಜಿಸಿದ್ದರು. 100 ಕ್ಕೂ ಹೆಚ್ಚು ಸ್ನೇಹಿತರು, ಸಂಬಂಧಿಗಳು ಉಪಸ್ಥಿತರಿದ್ದರು.
ಈ ವೇಳೆ ಕೆಲ ಅನಿತಾ ಸಂಬಂಧಿಗಳು ಸಂಭ್ರಮಾಚರಣೆ ಮಾಡುವ ಭರದಲ್ಲಿ ಪಿಸ್ತೂಲ್ನಿಂದ ಸಿಡಿಸಿದ ಗುಂಡು ಅನಿತಾ ಅವರ ಪ್ರಾಣಕ್ಕೆ ಕಂಟಕವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜೈರಾಂ ವರ್ಮಾ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.