News Kannada
Sunday, October 01 2023
ಉತ್ತರ ಪ್ರದೇಶ

ಲಕ್ನೋ: ಬಸ್ ನಿಂದ ಕೆಳಗೆ ಬಿದ್ದು ನಿವೃತ್ತ ಶಿಕ್ಷಕ ಸಾವು

A laborer surrendered to death as he could not afford to pay for his daughter's treatment
Photo Credit : Pexels

ಲಕ್ನೋ, ನ.11: ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಬಾಗಿಲಲ್ಲಿ ನಿಂತಿದ್ದ 70 ವರ್ಷದ ನಿವೃತ್ತ ಶಿಕ್ಷಕನೊಬ್ಬ ಸಮತೋಲನವನ್ನು ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾನೆ.

ನಗರದ ಹೊರವಲಯದಲ್ಲಿರುವ ಮೋಹನ್ ಲಾಲ್ ಗಂಜ್ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ.

ಮೃತರನ್ನು ಚಂದ್ರ ಪ್ರಸಾದ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಪಿಂಚಣಿಗೆ ಸಂಬಂಧಿಸಿದ ಕೆಲಸಕ್ಕಾಗಿ ಶಿಕ್ಷಣ ಇಲಾಖೆಯನ್ನು ಭೇಟಿ ಮಾಡಲು ಸಿಸೆಂಡಿಯಿಂದ ಕೈಸರ್ಬಾಗ್ ಗೆ ಬಸ್ ಹತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಹಪ್ರಯಾಣಿಕರ ಪ್ರಕಾರ, ಬಸ್ ಕಿಕ್ಕಿರಿದು ತುಂಬಿದ್ದರಿಂದ ನಿವೃತ್ತ ಶಿಕ್ಷಕ ದ್ವಾರದಲ್ಲಿ ನಿಲ್ಲಬೇಕಾಯಿತು ಎಂದು ಮೋಹನ್ ಲಾಲ್ ಗಂಜ್ ನ ಸ್ಟೇಷನ್ ಹೌಸ್ ಆಫೀಸರ್ (ಎಸ್ ಎಚ್ ಒ) ಕುಲದೀಪ್ ದುಬೆ ಹೇಳಿದ್ದಾರೆ.

“ಕೆಲವು ಪ್ರಯಾಣಿಕರು ಬಸ್ ನಿಲ್ಲಿಸಲು ಕೇಳಿದಾಗ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದನು. ಶಿಕ್ಷಕರು ಸಮತೋಲನವನ್ನು ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರ ಗಾಯಗಳಾಗಿವೆ” ಎಂದು ಎಸ್ಎಚ್ಒ ಹೇಳಿದ್ದಾರೆ.

ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಸಾವನ್ನಪ್ಪಿದ್ದಾರೆ.

See also  ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು