News Karnataka Kannada
Thursday, March 28 2024
Cricket
ಉತ್ತರ ಪ್ರದೇಶ

ರಾಯ್ ಬರೇಲಿ: ಅರ್ಚಕನ ಹತ್ಯೆಯ ಆರೋಪ, ಪುತ್ರನ ಬಂಧನ

ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 21 ವರ್ಷದ ಯುವಕನೊಬ್ಬ ತನ್ನ ಸ್ನೇಹಿತರಿಂದಲೇ ಕೊಲೆಯಾದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
Photo Credit : IANS

ರಾಯ್ ಬರೇಲಿ, ಮೇ 15: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಹತ್ಯೆ ಆರೋಪದ ಮೇಲೆ  ಅರ್ಚಕನ ಪುತ್ರ ನನ್ನು ಪೊಲೀಸರು ಬಂಧಿಸಿದ್ದಾರೆ.

ಆಶಿಯಾನಾ ಪ್ರದೇಶದಲ್ಲಿ ವಾಸಿಸುವ ಅರ್ಚಕ ರಾಮ್ ಮನೋಹರ್ ಅವಸ್ಥಿ (65) ಅವರ ಶವ ಶನಿವಾರ ರಾತ್ರಿ ಬಚ್ರಾವನ್ ನಲ್ಲಿ ಪತ್ತೆಯಾಗಿತ್ತು. ಮೃತರ ಕಿರಿಯ ಮಗ ಅನುರಾಗ್ ಕೊಲೆಯ ಬಗ್ಗೆ ದೂರು ನೀಡಿದ್ದು, ಆಶಿಯಾನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಚ್ರಾವನ್ ಇನ್ಸ್ಪೆಕ್ಟರ್ ಬ್ರಿಜೇಶ್ ರಾಯ್ ಪ್ರಕಾರ, ಹಿರಿಯ ಮಗ ಆಸ್ತಿಯ ದುರಾಸೆಯಿಂದ ತಂದೆಯನ್ನು ಹರಿತವಾದ ಆಯುಧದಿಂದ ಕೊಂದಿದ್ದಾನೆ.

ರಾಮ್ ಮನೋಹರ್ ಅವಸ್ಥಿ ಅವರು ಆಶಿಯಾನಾದ ಭದ್ರುಖ್ ಪ್ರದೇಶದಲ್ಲಿ ಅನುರಾಗ್ ಅವರೊಂದಿಗೆ ರುಚಿಖಂಡ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಮನೋಹರ್‌  ಅವರು ಸೆಕ್ಟರ್ ಎಲ್ ನಲ್ಲಿರುವ ಹನುಮಾನ್ ದೇವಾಲಯದ ಅರ್ಚಕರಾಗಿದ್ದರು. ರಾಮ್ ಮನೋಹರ್ ಅವರ ಹಿರಿಯ ಮಗ ರಾಜೇಂದ್ರ ಕೂಡ ಭದ್ರುಖ್ ಪ್ರದೇಶದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು.

ಅನುರಾಗ್ ಅವರ ಪ್ರಕಾರ, ಅವರ ತಂದೆ ಗುರುವಾರ ತನ್ನ ಹಿರಿಯ ಸಹೋದರನೊಂದಿಗೆ ಬೈಕಿನಲ್ಲಿ ಹೋಗಿದ್ದರು ಮತ್ತು ಮನೆಗೆ ಹಿಂದಿರುಗಲಿಲ್ಲ.

ತಂದೆ ಮತ್ತು ಹಿರಿಯ ಸಹೋದರ ವಾಪಸ್‌ ಬರದ ಕಾರಣ ಅನುರಾಗ್ ಶುಕ್ರವಾರ ರಾತ್ರಿ  ದೂರು ದಾಖಲಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು