News Karnataka Kannada
Friday, April 26 2024
ವಿದೇಶ

ಸಿಂಗಾಪುರದಲ್ಲಿ ದೇವರ ಚಿನ್ನ ಕದ್ದ ಅರ್ಚಕನಿಗೆ ಜೈಲು

Singapore priest jailed for stealing god's gold
Photo Credit : News Kannada

ಸಿಂಗಾಪುರ: ಸಿಂಗಾಪುರದ ಅತ್ಯಂತ ಹಳೆಯ ಹಿಂದೂ ದೇವಾಲಯದ ಭಾರತೀಯ ಅರ್ಚಕನಿಗೆ ಮಂಗಳವಾರ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ (ಸಿಂಗಾಪೂರಿಯನ್) ದೇವಾಲಯದ ದೇವತೆಗಳನ್ನು ಅಲಂಕರಿಸಲು ಬಳಸಿದ್ದ 1 ಮಿಲಿಯನ್ ಮೌಲ್ಯದ ಚಿನ್ನಾಭರಣಗಳನ್ನು ಪದೇ ಪದೇ ಗಿರವಿ ಇಟ್ಟು ಹಣ ಪಡೆದ ಆರೋಪ ಈತನ ಮೇಲಿದೆ.

ಸೌತ್ ಬ್ರಿಡ್ಜ್ ರೋಡ್‌ನಲ್ಲಿರುವ ಶ್ರೀ ಮಾರಿಯಮ್ಮನ್ ದೇವಸ್ಥಾನದ ಅರ್ಚಕ ಕಂದಸಾಮಿ ಸೇನಾಪತಿ ಅವರು ಆಭರಣಗಳನ್ನು ಗಿರವಿ ಇಡುವ ಮೂಲಕ $2.3 ಮಿಲಿಯನ್ (ಸಿಂಗಪೋರಿಯನ್) ಗಳಿಸಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ವಿಚಾರಣೆ ವೇಳೆ ಕೃತ್ಯ ಎಸಗಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.

ಕಂದಸಾಮಿ ಅವರು ಡಿಸೆಂಬರ್ 2013 ರಲ್ಲಿ ಹಿಂದೂ ದತ್ತಿ ಮಂಡಳಿ ನಲ್ಲಿ ಉದ್ಯೋಗಿಯಾಗಿದ್ದು, ಜುಲೈ 2018 ರಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬಡ್ತಿ ಪಡೆದರು ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನಿಸ್ ಸೀ ನ್ಯಾಯಾಲಯಕ್ಕೆ ತಿಳಿಸಿದ್ದರು.

2014 ರಲ್ಲಿ, ದೇವಾಲಯದ ಪವಿತ್ರ ಗರ್ಭಗುಡಿಯ ಕೀಗಳು ಮತ್ತು ನಂಬರ್ ಕೋಡ್ ಅನ್ನು ಅವರಿಗೆ ವಹಿಸಲಾಯಿತು. ದೇವಳದಲ್ಲಿ ಸುಮಾರು $1.1 ಮಿಲಿಯನ್ (ಸಿಂಗಪೋರಿಯನ್) ಮೌಲ್ಯದ ಸುಮಾರು 255 ಚಿನ್ನಾಭರಣಗಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು