News Kannada
Monday, December 11 2023
ವಿದೇಶ

ನಗರಗಳ ಪುನರ್ ನಿರ್ಮಾಣಕ್ಕೆ ನಿಧಿ ಸಂಗ್ರಹ: ಉಕ್ರೇನ್

Zelensky says war should end with Crimea's liberation
Photo Credit :

ಉಕ್ರೇನ್​​: ನಮ್ಮ ಸರ್ಕಾರ ಸೈನ್ಯಕ್ಕೆ ಧನಸಹಾಯ ನೀಡಲು ಮತ್ತು ಯುದ್ಧದಿಂದ ನಾಶವಾದ ನಗರಗಳು ಮತ್ತು ಪಟ್ಟಣಗಳನ್ನು ಪುನರ್​ನಿರ್ಮಿಸಲು ಹಣ ಸಂಗ್ರಹಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ.

ರಷ್ಯಾದ ಪಡೆಗಳನ್ನು ಹೊರಹಾಕಿದ ಸ್ಥಳಗಳಲ್ಲಿ ವಿದ್ಯುತ್, ಅನಿಲ, ನೀರು ಮತ್ತು ಫೋನ್ ಸೇವೆಯನ್ನು ಪುನಃಸ್ಥಾಪಿಸಲು ಈಗಾಗಲೇ ಕೆಲಸ ನಡೆಯುತ್ತಿದೆ. ಆಸ್ಪತ್ರೆಗಳನ್ನು ಮರು ಸಜ್ಜುಗೊಳಿಸಲು ಮತ್ತು ಬಂಕರ್​​‌ಗಳನ್ನು ತೆಗೆದುಹಾಕಲು ಹೆಚ್ಚಿನ ಕಾರ್ಯ ಮಾಡಬೇಕಾಗಿದೆ ಎಂದು ಅವರು ಮಂಗಳವಾರ ರಾತ್ರಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಮೊದಲ ತಿಂಗಳಲ್ಲಿ $50 ಮಿಲಿಯನ್‌ಗಿಂತಲೂ ಹೆಚ್ಚು ನೆರವು ಹರಿದು ಬಂದಿದೆ. ಉಕ್ರೇನ್​​ ಟೆನಿಸ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಹಾಗೂ ಮಾಜಿ ಸಾಕರ್ ಆಟಗಾರ ಆಂಡ್ರಿ ಶೆವ್ಚೆಂಕೊ ಅವರನ್ನು ನಿಧಿಸಂಗ್ರಹ ವೇದಿಕೆಗೆ ರಾಯಭಾರಿಯಾಗಿದ್ದಾರೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಕಳೆದ ದಿನದಿಂದ ಪೂರ್ವ ಡಾನ್​ಬಾಸ್​ ಪ್ರದೇಶದಲ್ಲಿ ರಷ್ಯಾದ ಪಡೆಗಳು ಯಾವುದೇ ಮಹತ್ವದ ಪ್ರಗತಿಯನ್ನು ಸಾಧಿಸಿಲ್ಲ. ಈ ಪ್ರದೇಶದಲ್ಲಿ ಸೈನಿಕರ ರಕ್ಷಣಾ ಕಾರ್ಯ ಮುಂದುವರೆದಿದೆ. ರಷ್ಯನ್ನರು ಸ್ಪಷ್ಟವಾಗಿ ಇಷ್ಟೊಂದು ಪ್ರತಿರೋಧವನ್ನು ಎದುರಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ.

ರಷ್ಯಾದ ಸೈನ್ಯವು ಎಸಗಿದ ಯುದ್ಧಾಪರಾಧಗಳ ಬಗ್ಗೆ ದೃಢಪಡಿಸಿದ ಮಾಹಿತಿಯೊಂದಿಗೆ ಉಕ್ರೇನ್ ಮುಂದಿನ ವಾರ ವಿಶೇಷ “ಬುಕ್ ಆಫ್ ಎಕ್ಸಿಕ್ಯೂಶನರ್ಸ್” ಅನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಇದೇ ವೇಳೆ ಉಕ್ರೇನ್​​ ಅಧ್ಯಕ್ಷರು ಹೇಳಿದ್ದಾರೆ.

See also  ಫ್ರಾನ್ಸ್‌ನಲ್ಲಿ ವಿಮಾನ ಪತನ: 5 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು