News Kannada
Friday, September 29 2023
ಕ್ಯಾಂಪಸ್

ಬೆಳ್ತಂಗಡಿ: ಆಧುನಿಕ ಕಥನ ಸಾಹಿತ್ಯ ಅಧ್ಯಯನ ಶಿಬಿರ ಉದ್ಘಾಟನೆ

Belthangady: Modern Narrative Literature Study Camp Inaugurated
Photo Credit :

ಬೆಳ್ತಂಗಡಿ: ನೀರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು,ಅದರ ಉಗ್ರ ಹಾಗೂ ಸೌಮ್ಯ ರೂಪಗಳನ್ನು ನಾವು ಕಾಣುತ್ತಿದ್ದೇವೆ. ಸಾಹಿತ್ಯದ ವಿಚಾರದಲ್ಲೂ ನೀರು ಕೇಂದ್ರಬಿಂದುವಾಗಿದ್ದು ಈ ಬಾರಿಯ ಶಿಬಿರದಲ್ಲಿ ಜಲಮೂಲ ಗಳನ್ನು ಪ್ರಮುಖ ಅಂಶವಾಗಿ ಪರಿಗಣಿಸಿ ಅಧ್ಯಯನ ನಡೆಯಲಿದೆ ಎಂದು ಖ್ಯಾತ ವಿಮರ್ಶಕ ಸಾಗರದ ಪ್ರೊ.ಟಿ.ಪಿ. ಅಶೋಕ ಹೇಳಿದರು.

ಅವರು ಉಜಿರೆ ಎಸ್. ಡಿ.ಎಂ.ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಹಾಗೂ ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಧುನಿಕ ಕಥನ ಸಾಹಿತ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸೂಕ್ಷ್ಮಗಳನ್ನು ಆಸ್ವಾಧಿಸುವ ಭಾವದೊಂದಿಗೆ ವೈವಿಧ್ಯಮಯ ಚಟುವಟಿಕೆ,ನಿರಂತರ ಭಾಗವಹಿಸುವಿಕೆಯಿಂದ ಶಿಬಿರಗಳು ಪೂರ್ಣತೆ ಪಡೆಯುತ್ತವೆ ಎಂದರು.

ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ ಜೀವಂತಿಕೆಯ ಬದುಕಿಗೆ ಅಧ್ಯಯನ ಸಂಸ್ಕೃತಿ ಪ್ರಾಮುಖ್ಯವಾಗಿದೆ. ವೃತ್ತಿ ಜೀವನದ ಅಧ್ಯಯನದೊಂದಿಗೆ ಸಾಹಿತ್ಯ,ಕಲೆಗಳ ಆಸಕ್ತಿಯನ್ನು ಒಗ್ಗೂಡಿಸಿಕೊಳ್ಳಬೇಕು. ಯೋಜನಾ ಬದ್ಧ ಕಾರ್ಯಕ್ರಮಗಳು ಉತ್ತಮ ಉದ್ದೇಶ ಹಾಗೂ ಫಲಿತಾಂಶವನ್ನು ನೀಡುತ್ತವೆ. ಇವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಯೋಜನ ಪಡೆಯಬೇಕು ಎಂದರು.

ಪ್ರಾಚಾರ್ಯ ಪಿ.ಎನ್. ಉದಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್,ಪಿಜಿ ಡೀನ್ ಡಾ.ಪಿ.ವಿಶ್ವನಾಥ್, ಸಂಯೋಜಕಿ ಡಾ.ಬೋಜಮ್ಮ ಕೆ.ಎನ್. ಉಪಸ್ಥಿತಿರಿದ್ದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ.ಸಂಪತ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಪದಾಧಿಕಾರಿ ದಶಮಿ ವಂದಿಸಿದರು.

See also  ಶಾಸಕರ ಹಳೆಯ ರಾಜಕೀಯ ವೈಷಮ್ಯ; ಶಿವಾನಂದ್, ಯತ್ನಾಳ್ ಮತ್ತೆ ಮುನ್ನೆಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು