News Kannada
Tuesday, March 28 2023

ಮನರಂಜನೆ

ಶೀಘ್ರವೇ ಕಿಲಾಡಿ ಚಿತ್ರ ತೆರೆಗೆ

Photo Credit :

ಶೀಘ್ರವೇ ಕಿಲಾಡಿ ಚಿತ್ರ ತೆರೆಗೆ

ಮೈಸೂರು, ನ06- ರೈತರು ಭೂಮಿಯನ್ನು ಹಣದಾಸೆಗಾಗಿ ಮಾರಾಟ ಮಾಡಿ ಕೊನೆಗೆ ಯಾವ ರೀತಿ ಪರಿತಪ್ಪಿಸುತ್ತಾನೆ ಎಂಬ ನೈಜ ಕಥೆಯಾಧಾರಿತ ಸಿನಿಮಾ ಕಿಲಾಡಿ ಚಿತ್ರವಾಗಿದ್ದು, ಶೀಘ್ರವೇ ಚಿತ್ರ ತೆರೆಗೆ ಬರಲಿದೆ ಎಂದು ನಟ, ನಿರ್ಮಾಪಕ ವಿನಯ್ ರತ್ನ ಸಿದ್ಧಿ ತಿಳಿಸಿದರು.

ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಟ, ನಿರ್ಮಾಪಕ ವಿನಯ್ ರತ್ನ ಸಿದ್ಧಿ, ಭೂ ಮಾಫಿಯ ಗಂಭೀರ ಸಮಸ್ಯೆಯಿಂದ ಬಳಲುವ ರೈತರಿಗೆ ವಿಶೇಷ ಸಂದೇಶ ಸಾರುವ, ಗ್ರಾಮೀಣ ನೈಜ ಕಥೆಯಾಧಾರಿತ ಚಿತ್ರ ‘ಕಿಲಾಡಿ’ ಚಿತ್ರವಾಗಿದ್ದು, ಶೀಘ್ರವೇ ತೆರೆಗೆ ಬರಲು ಸಿದ್ದವಾಗುತ್ತಿದೆ. 4 ಹಾಡುಗಳು ಸೇರಿದಂತೆ ಹಾಸ್ಯ, ನವಿರಾದ ಪ್ರೇಮ ಚಿತ್ರಕಥೆ ಒಳಗೊಂಡಿದೆ ಎಂದು ತಿಳಿಸಿದರು.

ಕಿಲಾಡಿ ಚಿತ್ರದ ನಾಯಕಿಯಾಗಿ ಚಂದನ, ನಟಿಸಿದ್ದು, ತಾರಾ ಬಳಗದಲ್ಲಿ ಅವಿನಾಶ್, ಬಸವರಾಜು, ಸುಬ್ಬೇಗೌಡ್ರು, ಶ್ರೀಹರ್ಷ, ಧನಂಜಯ್ ಮೊದಲಾದವರು ಅಭಿನಯಿಸಿದ್ದಾರೆ. ರವಿದೇವು ಸಂಗೀತ ನೀಡಿದ್ದು, ಚಿತ್ರವನ್ನು ಕೆ.ಆರ್.ಪೇಟೆ, ಮೈಸೂರು, ಚಿಕ್ಕಮಗಳೂರು, ಮಡಿಕೇರಿ ಮುಂತಾದ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಚಿತ್ರಕ್ಕೆ ಇನೊಬ್ಬ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.

See also  ನಾಯಿಯನ್ನು ಬಲೂನ್ ಕಟ್ಟಿ ಹಾರಿಸಿದವನ ವಿರುದ್ಧ ಪ್ರಕರಣ ದಾಖಲು; ಕ್ಷಮೆ ಕೇಳಿದ ಯುಟ್ಯೂಬ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು