News Kannada
Thursday, March 23 2023

ಮಂಗಳೂರು

ಮಂಗಳೂರು: ವೆನ್‍ಲಾಕ್‍ ಆಸ್ಪತ್ರೆಯ ಆವರಣದಲ್ಲಿ ಶ್ರವಣ ದಿನಾಚರಣೆ

mangaluru-today-is-world-hearing-dayamangaluru-hearing-day-at-wenlock-hospital-premises
Photo Credit : R Bhat

ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಯಡಿ ಜಿಲ್ಲಾ ವಿಲಕಚೇತನರ ಪುನರ್ವಸತಿಕೇಂದ್ರದ ವತಿಯಿಂದ ವಿಶ್ವ ಶ್ರವಣ ದಿನಾಚರಣೆಯನ್ನು ಮಾ‌.3ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ನಗರದ ವೆನ್‍ಲಾಕ್‍ ಆಸ್ಪತ್ರೆಯ ಆವರಣದಲ್ಲಿ ಶ್ರವಣದೋಷವನ್ನುತಪ್ಪಿಸಲು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆಕ್ರಮಗಳ ಜೊತೆಗೆ ಶ್ರವಣದೋಷದ ಪ್ರಾಮುಖ್ಯತೆಯನ್ನು ಡಿ.ಡಿ.ಆರ್.ಸಿಯ ಶ್ರವಣ ಶಾಸ್ತ್ರಜ್ಞ ರಯಾಟನ್‍ ಡಿಸೋಜಾ ಅವರು ತಿಳಿಸಿದರು.

ಲಯನ್ಸ್ ಲಿಂಬ್ ಸೆಂಟರ್ ಫಾರ್ ದಿ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ರಾಮಚಂದ್ರ ಕಾಮತ್‍ ಅವರು ಜಿಲ್ಲಾ ಪುನರ್ವಸತಿ ಕೇಂದ್ರದ ಬಗ್ಗೆ ದಿವ್ಯಾಂಗ ಚೇತನರಿಗೆ ಶ್ರವಣದೋಷದ ಬಗ್ಗೆ ಮಾಹಿತಿ ನೀಡಿದರು.

ನಂತರ 15 ಜನ ದಿವ್ಯಾಂಗ ಫಲಾನುಭವಿಗಳಿಗೆ ಶ್ರವಣ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಡಿ.ಡಿ.ಆರ್.ಸಿಯ ನೋಡಲ್‍ಅಧಿಕಾರಿ ಬಸವರಾಜ್‍ಎನ್.ಬಿ.,ಫಿಸಿಯೋಥೆರಪಿಸ್ಟ್ ಸಮೀಕ್ಷಾ ಎಸ್.ಶೆಟ್ಟಿ ಮತ್ತು ಮೊಬಿಲಿಟಿ ಭೋಧಕ ಡಿ.ಎಸ್. ನಾಗರಾಳ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿ ಗೀತಾದೇವಾಡಿಗ ಉಪಸ್ಥಿತರಿದ್ದರು.

See also  ಬೆಳ್ತಂಗಡಿ: ತಾಲ್ಲೂಕಿನ ಶೌರ್ಯ ಸಮಿತಿಗೆ ಮಾಸ್ಟರ್ ಮತ್ತು ಕ್ಯಾಪ್ಟನ್ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು