News Kannada
Sunday, March 26 2023

ವಿಶೇಷ

ಶತ ಶತಮಾನ ಆಚರಿಸಿಕೊಂಡ ಸಂತೆಪೇಟೆ ರಸ್ತೆಯಲ್ಲಿರುವ ಸೋಜಿಗದ ಮರ

A strange tree that has celebrated years
Photo Credit : News Kannada

ದೇಶದ ಇತಿಹಾಸ ತಿಳಿಸುವಂತೆ ಅಂದು ಅನೇಕ ವರ್ಷಗಳ ಕಾಲ ನಮ್ಮನ್ನಾಳಿ ದೇಶದ ಗತವೈಭವದ ಸಕಲ ಸಂಪತ್ತನ್ನು ದೋಚಿ ಸೂರೆಗೈದು ಹೋದ ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಸಂತೆಪೇಟೆ ರಸ್ತೆಯಲ್ಲಿರುವ ನಗರಸಭೆ ಆವರಣದಲ್ಲಿ ಬ್ರಿಟಿಷರೇ ನೆಟ್ಟು ಬೆಳಸಿ ರಕ್ಷಣೆ ನೀಡಿದ ಮರವು, ಇಂದಿಗೂ ಹಾಗೆ ಇದೆ.

ಹೆಬ್ಬಾವುಗಳ ಸಮೂಹವೇ ಒಂದನ್ನೊಂದು ಸುತ್ತಿ ಅಪ್ಪಿ, ತಬ್ಬಿ ಮುತ್ತಾಡುತ್ತಿರುವಂತೆ ತನ್ನ ಅನೇಕ ಬಾಹುಗಳಿಂದ ಸುಮಾರು ೩೦*೪೦ ಅಂದರೆ ೧೨೦ ಅಡಿ ಸುತ್ತಳತೆಯಲ್ಲಿ ಚಪ್ಪರದಂತೆ ಚಾಚಿ, ಬಾಚಿ ಬೆಳೆದು ನಿಂತ ಈ ದಪ್ಪ ದಪ್ಪ ಬಳ್ಳಿಗಳು ಅಡಿಯಿಂದ ಮುಡಿವರಗೆ ಒಂದನ್ನೊಂದು ಸುತ್ತಿ ಅಮರಿಕೊಂಡಂತೆ ಬೆಳೆದು ನಿಂತು ನೂರಾರು ಹಕ್ಕಿ ಪಕ್ಷಿಗಳಿಗೆ, ಆಶ್ರಯ ನೀಡುವುದೂ ಅಲ್ಲದೆ ಎಂತಹಾ ಬಿಸಿಲಿನ ತಾಪಕ್ಕೆ ಸಿಕ್ಕಿದವರು ಇದರ ಕೆಳಗೆ ಯಾರೇ ಬಂದರೂ ತಂಪಾದ ನೆರಳು ನೀಡುವ ಹಾಗೂ ಅದರ ಮೇಲೆ ಬಿದ್ದ ಮಳೆಯ ನೀರನ್ನು ಕೆಳಗೆ ಬಿಡದೆ ಒತ್ತಾಗಿರುವ ಹಸಿರು ಎಲೆಗಳ ಶುದ್ದ ಆಮ್ಲಜನಕ ನೀಡುವ ದೃಶ್ಯವನ್ನು ಯಾರಾದರೂ ವೀಕ್ಷಿಸಿಸಬಹುದು ಹಾಗೂ ಆಸ್ವಾಧಿಸಬಹುದಾಗಿದೆ.

ಆದರೆ ಅದೇ ಚಪ್ಪರದಲ್ಲಿ ವಾಸವಿರುವ ಹಕ್ಕಿ ಪಕ್ಷಿಗಳು ಹೆಚ್ಚು ಹೆಚ್ಚು ತಮ್ಮ ಮೊಟ್ಟೆ ಮರಿಗಳನ್ನಿಡುವುದರಿಂದ ಆ ಮೊಟ್ಟೆ ತಿನ್ನುವ ಆಸೆಗೆ ಕೆಲ ಹಾವುಗಳು ಹೇಗೋ ಇದರೊಳಗೆ ನುಸುಳಿ ಕೊಂಡಿರುವುದು ಸತ್ಯ ಸಂಗತಿಯೇ ಸರಿ. ಹಾಗೇ ಅದೇ ಕಾಲದಲ್ಲಿಯೇ ನಗರ ಮಧ್ಯಭಾಗದಲ್ಲಿರುವ ಹಾಸನ ಸಿಟಿ ಕ್ಲಬ್ ಆವರಣದಲ್ಲಿಯೂ ಅಂತಹದೇ ಸಸಿ ನೆಟ್ಟು ಬೆಳಸಿದ ಸಂಗತಿಯೂ ಇದೆ. ಆದರೆ ಇದೇ ಹೊತ್ತಿನಲ್ಲಿ ಆದಿಕಾಲದಿಂದ ನಗರ ಸಭೆಯವರು ಅದನ್ನು ಇಂದಿನವರೆಗೂ ಉಳಿಸಿಕೊಂಡಿ ಬಂದಿರುವುದು ಸಂತೋಷದ ವಿಷಯವಲ್ಲವೇ?

See also  ಬೆಳ್ತಂಗಡಿ: ನಿಡ್ಲೆ ರಕ್ಷಿತಾರಣ್ಯದಲ್ಲಿ 1300 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನಾಟಿ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು