News Kannada
Saturday, June 03 2023
ವಿಶೇಷ

ಪಂಜರ ಮೀನು ಕೃಷಿಯಲ್ಲಿ ವರ್ಷಕ್ಕೆ 5 ಲಕ್ಷ ರೂ. ದುಡಿಮೆ, ರವಿ ಸಾಧನೆ ಮಾದರಿ

Ravi Kharvi found a successful life in cage fish farming
Photo Credit : News Kannada

ಕುಂದಾಪುರ: ತಲ್ಲೂರು ಗ್ರಾಮದ ಕೋಟೆಬಾಗಿಲು ರವಿ ಖಾರ್ವಿ ಅವರು ಪಂಚಗಂಗಾವಳಿ ನದಿಯಲ್ಲಿ ಪಂಜರ ಮೀನು ಕೃಷಿ ಮಾಡುವುದರ ಮುಖಾಂತರ ಯಶಸ್ಸು  ಕಂಡುಕೊಂಡಿದ್ದಾರೆ. 3ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ಪೂರೈಸಿರುವ ಅವರು ಮೀನು ಸಾಕಾಣಿಕೆ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿ ಕೂಡ ಹೌದು.

ಹೊಟೇಲ್ ಕಾರ್ಮಿಕರಾಗಿರುವ ರವಿ ಖಾರ್ವಿ ಅವರು ಆಕಸ್ಮಿಕವಾಗಿ ಮೀನು ಕೃಷಿ ಕ್ಷೇತ್ರಕ್ಕೆ ಹೆಜ್ಜೆ  ಹಾಕುವುದರ ಮೂಲಕ ಪೂರ್ಣಾವಧಿಯಲ್ಲಿ ಪಂಜರ ಮೀನು ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ. 10 ಕ್ಕೂ ಹೆಚ್ಚಿನ ಜಾತಿಯ ಮೀನುಗಳನ್ನು ಪಂಚಾಗಂಗಾವಳಿ ನದಿಯಲ್ಲಿ ಪಂಚರದಲ್ಲಿ ಬೆಳೆಸುತ್ತಿದ್ದು ವರ್ಷಕ್ಕೆ 4 ರಿಂದ 5 ಲಕ್ಷದ ವರೆಗೆ ದುಡಿಮೆ ಮಾಡುತ್ತಿರುವ ರವಿ ಖಾರ್ವಿ ಮೀನು ಸಾಕಾಣಿಕೆಯಲ್ಲಿಯೂ ಜೀವನವನ್ನು ಮಾಡ ಬಹುದೆಂದು  ತೋರಿಸಿಕೊಟ್ಟಿದ್ದಾರೆ.

ಹತ್ತು ವರ್ಷಗಳ ಕಾಲ ಅನುಭವವನ್ನು ಹೊಂದಿರುವ ರವಿ ಖಾರ್ವಿ ಮೀನು ಸಾಕಾಣಿಕೆಯಲ್ಲಿ ಕಂಡು ಕೊಂಡ  ಅನುಭವವನ್ನು ಇತರರ ಜತೆ ಹಂಚಿಕೊಂಡು ಹಲವಾರು ಜನರಿಗೆ ತರಬೇತಿಯನ್ನು ನೀಡಿರುವ ಅವರು ಮೀನುಗಾರಿಕಾ ಇಲಾಖೆಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡುತ್ತಿದ್ದಾರೆ.  ಅವರನ್ನು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.

ಹೊಸ ಹೊಸ ಆವಿಷ್ಕಾರದ ಮೂಲಕ ಪಂಜರವನ್ನು ನಿರ್ಮಿಸಿಕೊಳ್ಳುವ ರವಿಖಾರ್ವಿ ನದಿಯಲ್ಲಿ ದೊರಕುವ ಕೆಂಬೆರಿ, ಕುರುಡೆ ಮೀನು, ಕೊಕ್ಕರೊ, ಕಳಸಿ ಮೀನಿನ ಮರಿಗಳನ್ನು ಹಿಡಿದು ಪಂಜರ ಮೀನು ಕೃಷಿಯಲ್ಲಿ ಬಳಸಿಕೊಳ್ಳುತ್ತಾರೆ.

20/10 ರ 1 ಗೂಡಿನಲ್ಲಿ 1200 ರಿಂದ 1500 ಮರಿ ಮೀನುಗಳನ್ನು ಬಿಡಲಾಗುತ್ತದೆ ಮೀನು ಬೆಳವಣಿಗೆ ಕಾಣಲು ಒಂದೂವರೆ ವರ್ಷ ತಗಲುತ್ತದೆ, ಹೆಚ್ಚು ಕಮ್ಮಿ ಒಂದು ಮೀನು ಒಂದರಿಂದ ಒಂದುವರೆ ಕೆಜಿ ವರೆಗೆ ತೂಗುತ್ತದೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಮೀನಿಗೆ 400 ರೂ ಬೆಲೆ ಇದೆ. ಒಂದು ಗೂಡಿನಲ್ಲಿ 1ಟನ್ ಮೀನು ಸಿಕ್ಕರೆ ಖರ್ಚೆಲ್ಲಾ ಕಳೆದು ಲಕ್ಷಕ್ಕೂ ಅಧಿಕ ಆದಾಯ ಗಳಿಸಬಹುದು ಎಂದು ರವಿ ಖಾರ್ವಿ ಹೇಳುತ್ತಾರೆ.

ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರವಿಖಾರ್ವಿ ಯುವ ಸಮುದಾಯಕ್ಕೆ ಮಾದರಿ ವ್ಯಕ್ತಿಯಾಗಿ ಗುರುತಿಸಿ ಕೊಂಡಿದ್ದಾರೆ.

See also  ವಿಟ್ಲ: ಮಾಣಿ ಬಾಲ ವಿಕಾಸದಲ್ಲಿ ಮಕ್ಕಳ ಕಲರವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು