News Kannada
Monday, June 05 2023
ಅಂಕಣ

ಸ್ನೇಹಿತರ ನಡುವಿನ ಸಂಭಾಷಣೆಯ ರೂಪದಲ್ಲಿರುವ ಪುಸ್ತಕ “ದಿ ಮಾಂಕ್ ಹೂ ಸೋಲ್ಡ್ ಇಸ್ ಫೆರಾರಿ”

Photo Credit : By Author

“ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ” ರಾಬಿನ್ ಶರ್ಮಾ ಅವರ ಪುಸ್ತಕ. ಇದು ಕಾಲ್ಪನಿಕವಾಗಿದೆ, ರಾಬಿನ್ ಶರ್ಮಾ ಜಾಗತಿಕವಾಗಿ ಗೌರವಿಸಲ್ಪಡುವ ಮಾನತಾವಾದಿ, ಜಗತ್ತಿನ ಉನ್ನತ ನಾಯಕತ್ವ ಮತ್ತು ವೈಯಕ್ತಿಕ ಅಭಿವೃದ್ಧಿಯ ಸಲಹೆಗಾರರಲ್ಲಿ ಅತ್ಯಂತ ಪ್ರಮುಖರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಇವರ ಗ್ರಾಹಕರಲ್ಲಿ ಪ್ರಸಿದ್ಧ ಬಿಲಿಯನೇರ್‌ಗಳು, ವೃತ್ತಿಪರ ಕ್ರೀಡಾ ಸೂಪರ್‌ಸ್ಟಾರ್‌ಗಳು ಮತ್ತು ಅನೇಕ ಫಾರ್ಚೂನ್ ೧೦೦ ಕಂಪನಿಗಳು ಸೇರಿವೆ, ಈ ಲೇಖಕರ #೧ ಅತ್ಯುತ್ತಮ ಮಾರಾಟ ಕೃತಿ ‘ದಿ ಮಾಂಕ್ ಹೊ ಸೋಲ್ಡ್, ಹಿಸ್ ಫೆರಾರಿ, ೯೨ ಭಾಷೆಗಳಲ್ಲಿ ತರ್ಜುಮೆಗೊಂಡಿದ್ದು, ಜಗತ್ತಿನಾದ್ಯಂತ ಹೆಸರುವಾಸಿ ಆಗಿ ರಾಬಿನ್ ಶರ್ಮರನ್ನು ಈ ಕಾಲದಲ್ಲಿ ಜೀವಂತವಿರುವ ಅತಿಹೆಚ್ಚು ಓದಲ್ಪಟ್ಟ ಕೃತಿಗಳ ಲೇಖಕರನ್ನಾಗಿಸಿವೆ. “ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ” ಅತ್ಯುತ್ತಮವಾದದ್ದು. ನೀವು ಎಂದಾದರೂ ಈ ಪುಸ್ತಕ ಬಯಸುವಿರಿ ಎಂದರೆ ಉಪಯುಕ್ತವಾಗಿದೆ.

ಇಬ್ಬರು ಸ್ನೇಹಿತರ ನಡುವಿನ ಸಂಭಾಷಣೆಯ ರೂಪದಲ್ಲಿ ಪುಸ್ತಕವನ್ನು ಬರೆಯಲಾಗಿದೆ. ಜೂಲಿಯನ್ ಮ್ಯಾಂಟಲ್ ಒಬ್ಬ ಯಶಸ್ವಿ ವಕೀಲ ಆದರೆ ಒತ್ತಡ ಮತ್ತು ಕೆಲಸದ ಒತ್ತಡದಿಂದ ತುಂಬಿರುವ ಕಥೆಯು, ಅಂತಿಮವಾಗಿ ತನ್ನ ಐಷಾರಾಮಿ ಮತ್ತು ಹಿಂದಿನ ಸಾಮಾನುಗಳನ್ನು ಬಿಟ್ಟು ಶಾಂತಿಯನ್ನು ಹುಡುಕಲು ಹಿಮಾಲಯ ಪರ್ವತಕ್ಕೆ ಹೋಗಲು ನಿರ್ಧರಿಸುತ್ತಾನೆ.

ಈ ಪುಸ್ತಕವನ್ನು ಓದುತ್ತ ಹೋದಂತೆ ಅನುಭವಿಸಲೂ ಸಾಧ್ಯ. ಜೀವನದಲ್ಲಿ ಧರ‍್ಯ, ಸಂತೋಷ, ಸಮತೋಲ, ಸಮೃದ್ಧಿಗಳನ್ನು ಸಾಧಿಸಲು ಅಗತ್ಯವಾದ ವ್ಯವಸ್ಥಿತ ಮಾರ್ಗವನ್ನು ಈ ಸ್ಫೂರ್ತಿದಾಯಕ ಕೃತಿ ತೋರುತ್ತದೆ. ಅದ್ಭುತ ಕೌಶಲದಿಂದ ಕೂಡಿದ ‘ದೃಷ್ಟಾಂತ ಕಥೆಯಿದು, “ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ” ಬದುಕಿನ ಸಮತೋಲ ಕೆಡಿಸಿಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರಣ ಕಥೆಯಿದು.

ಜೀವನವನ್ನೇ ಪರಿವರ್ತನೆ ಮಾಡುವ ಪ್ರಾಚೀನ ಸಂಸ್ಕೃತಿಯ ಕೇಂದ್ರಕ್ಕೆ ಯಾತ್ರೆ ಮಾಡಿ. ಅಲ್ಲಿ, ಆನಂದದಾಯಕ ಯೋಚನೆ, ಜೀವನದ ಪರಮಗುರಿಯ ಸಾಧನೆ, ಸಂಯಮ, ಧರ‍್ಯ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳುವುದು, ಸಮಯದ ಮಹತ್ವವನ್ನು ಅರಿಯುವುದು, ಸಂಬAಧಗಳನ್ನು ಪೋಷಿಸುವುದನ್ನು ಮತ್ತು ಪ್ರತಿದಿನದಲ್ಲೂ ಪರಿಪೂರ್ಣವಾಗಿ ಬಾಳುವುದನ್ನೂ ಕಲಿಸುವ ಶಕ್ತಿಶಾಲಿ, ಪ್ರಾಯೋಗಿಕ ವಿವೇಕಯುತ ಪಾಠಗಳನ್ನು ಕಲಿಯುವುದು. ಇದು ಪ್ರತಿ ಅಧ್ಯಾಯದ ಕೊನೆಯಲ್ಲಿ ಕ್ರಿಯೆಯ ಅಂಶಗಳನ್ನು ಒಳಗೊಂಡಿರುವ ಸಾರಾಂಶವಾಗಿದೆ.

ತನಗೆ ಯಾವುದಕ್ಕೂ ಸಮಯವಿಲ್ಲ, ಜೀವನವು ತನ್ನನ್ನು ನಿಯಂತ್ರಿಸುತ್ತಿದೆ ಮತ್ತು ದಿನಗಳು ಬಹಳ ವೇಗವಾಗಿ ಕಳೆಯುತ್ತಿವೆ ಎಂದು ಭಾವಿಸುವ ಪ್ರತಿಯೊಬ್ಬರೂ ಖಂಡಿತವಾಗಿಯೂ ಓದಬೇಕಾದ ಪುಸ್ತಕವಾಗಿದೆ. “ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ” ನಮ್ಮನ್ನು ಹೇಗೆ ಕರಗತ ಮಾಡಿಕೊಳ್ಳುವುದು ಎಂಬುದರ ಕುರಿತು. ಯಾವುದೇ ತಪ್ಪುಗಳಿಲ್ಲ, ಕೇವಲ ಪಾಠಗಳು, ಹಿನ್ನಡೆಗಳನ್ನು ವೈಯಕ್ತಿಕ ವಿಸ್ತರಣೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶಗಳಾಗಿ ನೋಡಿ. ನೀವು ನಿಜವಾಗಿಯೂ ಸ್ಫೂರ್ತಿ ಪಡೆಯಲು ಬಯಸಿದರೆ, ನಾನು ವೈಯಕ್ತಿಕವಾಗಿ ಈ ಪುಸ್ತಕವನ್ನು ಶಿಫಾರಸು ಮಾಡುತ್ತೇನೆ. ಚಿಕ್ಕ ಪಾಠಗಳು ನಿಮ್ಮ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ.

See also  ಕಾರ್ಕಳ: 18ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಡಾ ಯು.ಬಿ. ರಾಜಲಕ್ಷ್ಮೀ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4383

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು