News Kannada
Friday, March 31 2023

ಸಾಂಡಲ್ ವುಡ್

ಮಾರ್ಚ್ 4 ರಂದು ತೆರೆಯ ಮೇಲೆ ಬರಲಿದೆ ವಾಸುದೇವ ರೆಡ್ಡಿ ನಿರ್ದೇಶನದ ‘ಮೈಸೂರು’

Photo Credit : News Kannada

ಸ್ಯಾಂಡಲ್‌ವುಡ್‌: ‘ಮೈಸೂರು’… ಇಂತಹ ಕ್ಯಾಚಿಯಾಗಿರೋ ಟ್ರೈಟಲ್ ಇಟ್ಕೊಂಡು, ಲಿರಿಕಲ್ ಸಾಂಗ್, ಟ್ರೈಲರ್, ಟೀಸರ್ ಮೂಲಕ ಭರವಸೆ ಹುಟ್ಟಿಸಿರುವ ಮೈಸೂರು ಸಿನೆಮಾ ಇದೇ ತಿಂಗಳ ೪ ರಂದು ರಿಲೀಸ್ ಗೆ ಸಿದ್ದವಾಗಿದೆ. ಮೈಸೂರು ಅಂದಾಕ್ಷಣ ನೆನಪಾಗೋದೇ ಅಲ್ಲಿನ ಜಗತ್ಪ್ರಸಿದ್ಧ ಅರಮನೆ, ದಸರಾ , ಚಾಮುಂಡಿ ಬೆಟ್ಟ, ಸುತ್ತ ಮುತ್ತಲಿನ ಒಂದಷ್ಟು ಪ್ರವಾಸಿ ತಾಣ. ಆದ್ರೆ ಈ ಸ್ಥಳದ ಹೆಸರನ್ನೇ ಸಿನೆಮಾ ಶೀರ್ಷಿಕೆಯಾಗಿಟ್ಟು ಸುದ್ದಿ ಮಾಡ್ತಿರೋದು ಮೈಸೂರು ಚಿತ್ರತಂಡ.

ಹೌದು,,ವಾಸುದೇವ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಅನಿವಾಸಿ ಕನ್ನಡಿಗನೊಬ್ಬನ ಪ್ರೇಮ್ ಕಹಾನಿಯನ್ನೊಳಗೊಂಡಿರುವ ಚಿತ್ರ. ಇದೊಂದು ಬ್ಯೂಟಿಫುಲ್ ಮ್ಯೂಸಿಕಲ್ ಲವ್ ಸ್ಟೋರಿ. ಮೂಲತಃ ಮೈಸೂರಿನವರೇ ಆದ ನಿರ್ದೇಶಕ ವಾಸುದೇವ ರೆಡ್ಡಿ ಈ ಕಥೆಗೆ ರುವಾರಿ. ಚಿತ್ರದಲ್ಲಿ ಮೈಸೂರಿನ ಸುಂದರ ತಾಣಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದ್ದು, ಸಿನೆಮಾವನ್ನ ನೋಡುವ ಪ್ರೇಕ್ಷನಿಗೆ ತಾನೇ ಮೈಸೂರನ್ನ ಸುತ್ತಿದಷ್ಟು
ಮನೋಜ್ಞ ವೆನಿಸುತ್ತದೆಯಂತೆ.

ಈಗಾಗಲೇ ರಿಲೀಸ್ ಆಗಿದ್ದ ಚಿತ್ರದ ಟ್ರೈಲರ್ ನಲ್ಲಿ ಮೈಸೂರು ಮತ್ತು ಒಡಿಶಾ ರಾಜ್ಯಗಳ ನಡುವೆ ಚಲಿಸುವ ಈ ಕಥೆ ಯಲ್ಲಿ ಪ್ರೇಮಕಥೆಯೊಂದಿಗೆ ಮಾಸ್ ಎಳೆಯೂ ಇರಲಿದೆ ಎಂಬ ಸುಳಿವು ಸಿಕ್ಕಿದೆ. ಪ್ರೇಮ ಕಥೆ ಅಂದಾಕ್ಷಣ ಒಂದಷ್ಟು ರೆಡಿ ಸೂತ್ರಗಳ ಊಹೆಗೆ ನಿಲುಕದ ಕಥೆ ಈ ಚಿತ್ರದಲ್ಲಿದ್ದು, ಪ್ರೇಮದೊಂದಿಗೆ ಭಾವನೆಗಳ ತೊಳಲಾಟವನ್ನೂ ಪೋಣಿಸಿ, ಇಂಟ್ರಸ್ಟಿಂಗ್ ಎನಿಸೋ ಟ್ವಿಸ್ಟ್, ಮೈ ನವಿರೇಳಿಸೋ ಸಾಹಸ ಸನ್ನಿವೇಷಗಳಿರೋದು
ಗಮನಕ್ಕೆ ಬರುತ್ತೆ.

ಈ ಕಥೆಗೆ ನಾಯಕನಾಗಿ ಬಣ್ಣಹಚ್ಚಿದ್ದು ಒಡಿಶಾ ಮೂಲದ ಸಂಹಿತ್ ಎನ್ನುವುದು ಮತ್ತೊಂದು ವಿಶೇಷ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಒಡಿಶಾದ ನಂಟು ಸೇರಿಕೊಂಡಂತಾಗಿದೆ. ಕಥೆಗೆ ಅನುಗುಣವಾಗಿ ನಾಯಕನ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈಗಾಗಲೇ ಇವರು ಒಡಿಯಾ ಭಾಷೆಯಲ್ಲಿ ಇಪ್ಪತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರೋ ಅನುಭವವಿದೆಯಂತೆ. ಇವರಿಗೆ ನಾಯಕಿಯಾಗಿ ಪೂಜಾ ಬಣ್ಣ ಹಚ್ಚಿದ್ದಾರೆ.

ಮ್ಯೂಸಿಕಲ್ ಲವ್ ಸ್ಟೋರಿ ಯಾಗಿರೋ ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು ಒಂದಕ್ಕಿಂತ ಒಂದು ಸುಂದರವಾಗಿ ಮೂಡಿಬಂದಿವೆ. ಒಬ್ಬರಲ್ಲ ಇಬ್ಬರಲ್ಲ ಮೂವರು ಸಂಗೀತ ನಿರ್ದೇಶಕರು ಈ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ರಮಣಿ ಸುಂದರೇಶನ್, ಅನಿಲ್ ಮತ್ತು ವಿಜಯ್ ರಾಜ್ ಐದು ಹಾಡುಗಳನ್ನು ಮೈಸೂರಿಗಾಗಿಯೇ ರೂಪಿಸಿದ್ದಾರೆ. ರನ್ ಆಂಟನಿ ಖ್ಯಾತಿಯ ನಿರ್ದೇಶಕ ರಘು ಶಾಸ್ತ್ರಿ, ರವಿಶಂಕರ್ ನಾಗ್ ಮತ್ತು ಅನಿಲ್ ಕೃಷ್ಣ ಸಾಹಿತ್ಯ ರಚಿಸಿರೋ ಈ ಹಾಡುಗಳಿಗೆ ರಾಜೇಶ್ ಕೃಷ್ಣನ್, ಉಷಾ ಪ್ರಕಾಶ್, ಇಶಾ ಸುಚಿ, ಪಂಚಮ್, ಚೇತನ್ ನಾಯಕ್, ಪವನ್ ಪಾರ್ಥ ಮುಂತಾದವರು ಧ್ವನಿಯಾಗಿದ್ದಾರೆ.

ಇನ್ನುಳಿದಂತೆ ತಾರಾಗಣದಲ್ಲಿ ಇತ್ತೀಚಿಗಷ್ಟೇ ಅನಾರೋಗ್ಯದಿಂದ ಮರೆಯಾಗಿರುವ ಖ್ಯಾತ ಖಳನಟ ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಸೂರ್ಯ, ಗಟ್ಟಿಮೇಳ ಖ್ಯಾತಿಯ ರವಿಶಂಕರ್, ಜ್ಯೂನಿಯರ್ ನರಸಿಂಹರಾಜು, ಬಿಗ್ ಬಾಸ್ ಖ್ಯಾತಿಯ ಜಯಶ್ರೀ, ಒಡಿಶಾದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಫಂಡಾ ಮುಂತಾದವರ ತಾರಾಗಣವಿದೆ.

See also  ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

ಈ ಮೊದಲೇ ಹೇಳಿದಂತೆ ಟ್ರೈಲರ್ ತುಣುಕಲ್ಲಿ ಒಂದು ಬಗೆಯ ಕ್ರಾಂತಿಯ ಎಳೆ ಕಾಣತ್ತೆ. ಆದ್ರೆ ಅದು ಪ್ರೀತಿಗಾಗಿ ನಡೆಯೋದ ಅಥವಾ ಸಾಮಾಜಿಕ ಮೌಲ್ಯಗಳಿಗಾಗಿ ತುಡಿಯುವ ಮನಸಿನಿಂದಾಗಿ ನಡೆಯೋದ ಎಂಬ ಗುಟ್ಟನ್ನು ಚಿತ್ರತಂಡ ರಟ್ಟು ಮಾಡದೇ ಗೌಪ್ಯತೆ ಕಾಪಾಡಿಕೊಂಡಿದೆ . ಆದ್ರೆ ಇದೆಲ್ಲಕ್ಕೂ ಮಾರ್ಚ್ ೪ ರಂದು ಸಿನಿಮಾ ರಿಲೀಸ್ ಬಳಿಕವೇ ಉತ್ತರ ದೊರೆಯಲಿದೆ. ಎಸ್‌ಆರ್ ಕಂಬೈನ್ಸ್ ಹುಣಸೂರು ಬ್ಯಾನರ್ ನಡಿ ವಾಸುದೇವ್
ರೆಡ್ಡಿ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣ- ಭಾಸ್ಕರ್ ರೆಡ್ಡಿ, ಸಂಕಲನ- ಸಿದ್ದು ಭಗತ್, ನೃತ್ಯ ನಿರ್ದೇಶನ-ಮೈಸೂರ್ ರಾಜು, ಸ್ಟಾರ್ ನಾಗಿ, ಸುಧಾಕರ್ ವಸಂತ್, ಸಾಹಸ- ಶ್ರೀಕಾಂತ್ ಹೈದ್ರಾಬಾದ್ ತಾಂತ್ರಿಕ ವರ್ಗವಾಗಿ ಸಹಕಾರ ಮೈಸೂರು ಚಿತ್ರಕ್ಕಿದ್ದು, ಮಾರ್ಚ್ ೪ ರಂದು ತೆರೆಯ ಮೇಲೆ ಮೈಸೂರು ಸಿನೆಮಾ ಅನಾವರಣಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

6528

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು