News Kannada
Thursday, March 23 2023

ಮುಂಬೈ

ವಾಮನ ಎನ್.ಹೊಳ್ಳ  ಅವರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ

Vaman N.Holla Honoured with Chatrapati Shivaji Award-2023
Photo Credit : News Kannada

ಮುಂಬಯಿ (ಆರ್‌ಬಿಐ), ಮಾ.07: ಮುಂಬಯಿ ಪೀಪಲ್’ಸ್ ಆರ್ಟ್ ಸೆಂಟರ್ ಆಯೋಜಿಸಿದ್ದ ವಾರ್ಷಿಕ 2023ನೇ ಸಾಲಿನ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕಾಂಟೆಕ್‌ ಇನ್‌ಸ್ಟ್ರುಮೆಂಟ್ಸ್‌ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ನಿರ್ವಾಹಕ ನಿರ್ದೆಶಕ ಹಾಗೂ  ಬಾಂಬೆ ಸೌತ್ ಕೆನರಾ ಬ್ರಾಹ್ಮಿಣ್ಸ್‌  ಅಸೋಸಿಯೇಶನ್ (ಬಿಎಸ್‌ ಕೆಬಿಎ) ಉಪಾಧ್ಯಕ್ಷ ವಾಮನ ಎನ್.ಹೊಳ್ಳ  ಅವರಿಗೆ ‘ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2023’ ವಾರ್ಷಿಕ ಪ್ರಶಸ್ತಿ  ಪ್ರದಾನ ಮಾಡಲಾಯಿತು.

ಇತ್ತೀಚೆಗೆ ಪೀಪಲ್ಸ್ ಆರ್ಟ್ ಸೆಂಟರ್ ತನ್ನ 1045ನೇ ಕಾರ್ಯಕ್ರಮವನ್ನು  ಪೂವಾಯಿ ಹಿರಾನಂದನಿ ಗಾರ್ಡನ್ಸ್  ಮೆಲುಹಾ ಬಾಂಕ್ವೆಟ್ ಸಭಾಗೃಹದಲ್ಲಿ ಆಯೋಜಿಸಿತ್ತು.  ಹನ್ನೆರಡನೇ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್, ಪಾರ್ಲೆ ತಿಲಕ್ ವಿದ್ಯಾಲಯ ಅಸೋಸಿಯೇಶನ್‌ನ ನಿರ್ದೇಶಕ ಬನ್ನಿ ಧುರಂಧ‌ರ್ ಮತ್ತು ಮುಂಬಯಿ ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸುಂದರ್ ರಾಜ್‌ದೀಪ್ ಅತಿಥಿಗಳಾಗಿದ್ದು  ವಾಮನ್‌ ಹೊಳ್ಳ ಸೇರಿದಂತೆ ಇನ್ನಿತರ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಅಲ್ಲದೇ ಪೀಪಲ್ಸ್‌ ಆರ್ಟ್‌ ಸ್ಮರಣಿಕೆ ಬಿಡುಗಡೆಗೊಳಿಸಿದರು. ಆರ್ಟ್‌ ಸೆಂಟರ್‌ನ ದೀರ್ಘ ಅವಧಿಯ ಸೇವೆಯನ್ನು ಅತಿಥಿಗಳು ಪ್ರಶಂಸಿದರು. ಆರ್ಟ್ ಸೆಂಟರ್‌ ಮುಖ್ಯಸ್ಥ ಗೋಪಾಲಕೃಷ್ಣ ಪಿಳ್ಳೆ ಸ್ವಾಗತಿಸಿ ವಂದಿಸಿದರು.

See also  ಅರಸೀಕೆರೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ನಾಮಕವಸ್ಥೆ ಕಾಮಗಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು