News Kannada
Thursday, March 23 2023

ಕರ್ನಾಟಕ

ಹೆಚ್ಎಸ್ಎಂ ನಗರದಲ್ಲಿ ಸ್ವಚ್ಚತಾಕಾರ್ಯ!

Photo Credit :

ಹೆಚ್ಎಸ್ಎಂ ನಗರದಲ್ಲಿ ಸ್ವಚ್ಚತಾಕಾರ್ಯ!

ಗುಂಡ್ಲುಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ 1ನೇ ವಾರ್ಡ್ ಹೆಚ್.ಎಸ್.ಮಹದೇವಪ್ರಸಾದ್ ನಗರದಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಕುರಿತಂತೆ ದೂರುಗಳು ಬಂದ ಹಿನ್ನಲೆಯಲ್ಲಿ ಇದೀಗ  ಪುರಸಭೆ ಎಚ್ಚೆತ್ತುಕೊಂಡು  ಸ್ವಚ್ಛತಾ ಕಾರ್ಯದಲ್ಲಿ ತೊಡಗುವುದರೊಂದಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಮಹದೇವಪ್ರಸಾದ್ ನಗರದಲ್ಲಿ ಮೂಲಭೂತ ಸೌಕರ್ಯ ಕೊರತೆ ಜತೆಗೆ ಅವ್ಯವಸ್ಥೆಯೂ ತಾಂಡವವಾಡುತ್ತಿತ್ತು. ಈ ಕುರಿತಂತೆ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಇದೀಗ ಪುರಸಭೆಯ ಪೌರಕಾರ್ಮಿಕರನ್ನು ವಾರ್ಡ್ ಗೆ ಕಳುಹಿಸಿ ವಾರ್ಡ್ ಸುತ್ತಮುತ್ತ ಇದ್ದ ಬೇಲಿ ಕತ್ತರಿಸಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಲ್ಲದೆ, ಚರಂಡಿ ಸುತ್ತಮುತ್ತ ಇದ್ದ ಕಸವನ್ನು ತೆರವು ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಇದುವರೆಗೆ ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣದಿಂದ ತ್ಯಾಜ್ಯಗಳು ಅಲ್ಲಿಯೇ ಕೊಳೆತು ದುರ್ನಾತ ಬೀರುತ್ತಿರುವುದರಿಂದ ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದಲ್ಲದೆ ಸೊಳ್ಳೆ ಕ್ರಿಮಿಕೀಟನಾಶಕಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಭಯ ಆರಂಭವಾಗಿತ್ತು. ವಾರ್ಡ್ ನಲ್ಲಿ ಕಸದ ಸಮಸ್ಯೆ ಉಂಟಾಗಲು ಕಾರಣ ಹೇಳುವುದಾದರೆ ಪುರಸಭಾ ವತಿಯಿಂದ ಯಾವುದೇ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿರಲಿಲ್ಲ. ಅಷ್ಟೇ ಅಲ್ಲ ಅಲ್ಲೊಂದು ಕಸದ ಡಬ್ಬವನ್ನು ಕೂಡ ವಾರ್ಡ್ನ ಪ್ರಮುಖ ಬೀದಿಗಳಲ್ಲಿ ಇಟ್ಟಿರಲಿಲ್ಲ. ಇದರಿಂದ ಸಾರ್ವಜನಿಕರು ರಸ್ತೆಬದಿಯನ್ನೇ ಅವಲಂಬಿಸಿ ಕಸವನ್ನು ಅಲ್ಲೇ ಹಾಕಿ ಹೋಗುತ್ತಿದ್ದರು. ಕಸಗಳು ಎಲ್ಲೆಂದರಲ್ಲಿ ಹರಡಿ ಚರಂಡಿಯಲ್ಲಿ ಬಿದ್ದಿದ್ದರಿಂದ ಚರಂಡಿಯಲ್ಲಿ  ತ್ಯಾಜ್ಯ ನೀರು ಹರಿಯದೆ ವಾತಾವರಣ ಕಲುಷಿತವಾಗಿತ್ತು.

ಈಗ ಪುರಸಭೆ ಈ ನಗರದತ್ತ ಗಮನಹರಿಸಿದ್ದು, ಇನ್ನು ಮುಂದೆಯಾದರೂ ಇಲ್ಲಿನ ನಿವಾಸಿಗಳು ನೆಮ್ಮದಿಯಾಗಿ ವಾಸಮಾಡಬಹುದೇನೋ.

See also  ಕೋವಿಡ್ ನಿಂದ ನರಳಾಡುತ್ತಿರುವ ತಾಯಿಯನ್ನು ಕಂಡು, ನೊಂದ ಮಗ ನೇಣಿಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು