News Kannada
Sunday, April 02 2023

ಕರ್ನಾಟಕ

ಗುಂಡ್ಲುಪೇಟೆಯ 21ನೇ ವಾರ್ಡ್ ನಲ್ಲಿ ಶುಚಿತ್ವ ಮರೀಚಿಕೆ!

Photo Credit :

ಗುಂಡ್ಲುಪೇಟೆಯ 21ನೇ ವಾರ್ಡ್ ನಲ್ಲಿ ಶುಚಿತ್ವ ಮರೀಚಿಕೆ!

ಚಾಮರಾಜನಗರ: ಪಟ್ಟಣದ ನಡುವೆ ಇರುವ ಬೀದಿಯೊಂದು ಉತ್ತಮ ಚರಂಡಿ ವ್ಯವಸ್ಥೆ ಹೊಂದದೆ, ಡಾಂಬರು ರಸ್ತೆಯಿಲ್ಲದೆ, ಗಿಡಗಂಟಿಗಳಿಂದ ಕೂಡಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಸತ್ಯ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ  ಹೊಸೂರು-ದುಂದಾಸನಪುರ ನಡುವೆ ಹಾದುಹೋಗಿರುವ 21 ನೇ ವಾರ್ಡಿನ ಕಥೆ ನೋಡಿದರೆ ನಮಗೆ ಪಟ್ಟಣದ ಕಥೆಯೇ ಹೀಗಾದರೆ ಇನ್ನು ಹಳ್ಳಿಗಳ ಪರಿಸ್ಥಿತಿ ಇನ್ನೇನಪ್ಪಾ ಎಂಬ ಚಿಂತೆ ಕಾಡದಿರದು.

ಈಗಾಗಲೇ ಗುಂಡ್ಲುಪೇಟೆಯಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ಪಟ್ಟಣದ ಜನ ಸೊಳ್ಳೆಗಳ ಹಾವಳಿಯಿಂದಾಗಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಿರುವಾಗ ಪಟ್ಟಣದಲ್ಲಿ ಕುರುಚಲು ಕಾಡು ಬೆಳೆದು, ಚರಂಡಿಯನ್ನೆಲ್ಲ ಆಕ್ರಮಿಸಿ ತ್ಯಾಜ್ಯ ನೀರು ಹರಿಯದೆ ಅಲ್ಲಿಯೇ ನಿಂತರೆ ದುರ್ವಾಸನೆ ಬೀರುತ್ತಾ ಸೊಳ್ಳೆಗಳಿಗೆ ಆವಾಸ ಸ್ಥಾನವಾಗಿ ಮಾರ್ಪಟ್ಟರೆ ಇಲ್ಲಿ ವಾಸ ಮಾಡುವ ಜನರ ಗತಿಯೇನು?

ಈ ವ್ಯಾಪ್ತಿಯಲ್ಲಿ ಬಡವರೇ ವಾಸ ಮಾಡುತ್ತಿರುವುದರಿಂದ ಹೇಗೋ ಬದುಕುತ್ತಾರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂಬುದು ಸ್ಥಳೀಯ ಪ್ರತಿನಿಧಿಗಳ ಧೋರಣೆಯೋ ಗೊತ್ತಿಲ್ಲ. ಯಾರೂ ಕೂಡ ಇದರತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಪರಿಣಾಮ ಇಲ್ಲಿಯ ಜನ ಸದಾ ಭಯದಲ್ಲಿಯೇ ಬದುಕುವಂತಾಗಿದೆ. ಈ ವಾರ್ಡ್ ನಲ್ಲಿ ಬೀಡಿ ಕಟ್ಟುವ ಮತ್ತು ಕುರಿ, ಕೋಳಿ ಸಾಕಾಣಿಕೆ ಮಾಡಿ ಬದುಕುವ ಬಡ ಜನರೇ ಹೆಚ್ಚಿದ್ದಾರೆ. ಇಲ್ಲಿನ ಮನೆಗಳ ಪಕ್ಕದಲ್ಲಿ ಖಾಲಿ ಜಾಗಗಳಿದ್ದು, ಅದರ ಮಾಲಿಕರು ಕುರುಚಲು ಕಾಡುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇನ್ನು ಬೀದಿಗೊಂದು ಸುತ್ತು ಹೊಡೆದರೆ ಬರೀ ಇಲ್ಲಗಳದ್ದೇ ಸಾಮ್ರಾಜ್ಯ ಕಾಣಿಸುತ್ತದೆ.

ರಸ್ತೆ ಇಲ್ಲ, ಚರಂಡಿ ಸುಸ್ಥಿತಿಯಲ್ಲಿಲ್ಲ, ಸ್ವಚ್ಛತೆಯಂತು ಇಲ್ಲವೇ ಇಲ್ಲ. ಹೀಗೆ  ಹತ್ತಾರು ಸಮಸ್ಯೆಗಳು ಮೇಲ್ನೋಟಕ್ಕೆ ಕಾಣಲು ಸಿಗುತ್ತದೆ. ಖಾಲಿ ಸ್ಥಳದಲ್ಲಿ ಬೆಳೆದ ಮುಳ್ಳಿನ ಪೊದೆಗಳು ಮನೆಯನ್ನೇ ಆವರಿಸಿ ಬೆಳೆಯುತ್ತಿವೆ. ಈ ಪೊದೆಗಳಲ್ಲಿ ಹಾವು, ಚೇಳಿನಂತಹ ವಿಷ ಜಂತುಗಳು ಸೇರಿಕೊಂಡು ಭಯ ಹುಟ್ಟಿಸುತ್ತಿವೆ. ಇನ್ನು ಬೀದಿ ನಾಯಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ಕುರಿ, ಕೋಳಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿವೆ.

ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ತ್ಯಾಜ್ಯ ಕೊಳೆತು ನಾರುತ್ತಿದೆ. ಜತೆಗೆ ದುರ್ವಾಸನೆ ಬೀರುತ್ತಿದೆ. ಇಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರಾತ್ರಿಯಾದರೆ ಮನೆಯೊಳಕ್ಕೆ ನುಗ್ಗಿ ಕಚ್ಚುತ್ತಿವೆ.
ಈಗಾಗಲೇ ಡೆಂಗ್ಯೂನಿಂದ ಹಲವರು ಬಳಲುತ್ತಿದ್ದು, ಇಲ್ಲಿನ ಪರಿಸರವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಹಲವರು ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಉತ್ತಮ ವಾತಾವರಣ ನಿರ್ಮಿಸಿಕೊಡುತ್ತಾರಾ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನ ಕಾಯುತ್ತಿದ್ದಾರೆ.

See also  ಬ್ರಿಡ್ಜ್ ಕೆಳಗಡೆ ಕಾಂಗ್ರೆಸ್ ನಾಯಕಿಯ ಶವ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು