ಚಾಮರಾಜನಗರ: ಜಿಂಕೆ ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡಲು ಕೊಂಡೊಯ್ಯುವ ವೇಳೆ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂನ ಪರೇಕಟ್ಟು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಣಗಿರಿ ಜಿಲ್ಲೆಯ ಅಂಚಟ್ಟಿ ತಾಲೂಕಿನ ನಟಾರಪಾಳ್ಯ ಗ್ರಾಮದ ನಿವಾಸಿ ಗೋಪಾಲ ಬಂಧಿತ ಆರೋಪಿ. ಗೋಪಾಲ್ ಜಿಂಕೆ ಮಾಂಸವನ್ನು ಮಾರಾಟ ಮಾಡಲು ಗೋಪಿನಾಥಂ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 25 ಕೆಜಿ ಜಿಂಕೆ ಮಾಂಸ, ಒಂದು ಬೈಕ್, ಎರಡು ಚೂರಿ, ಒಂದು ಮೊಬೈಲ್, ಒಂದು ನಾಡ ಬಂದೂಕು, ಒಂದು ಬ್ಯಾಟರಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.