News Kannada
Monday, September 25 2023
ಬಾಗಲಕೋಟೆ

ಬಾಗಲಕೋಟೆ: ನೈರ್ಮಲ್ಯದಿಂದ ವಂಚಿತರಾದ ಕಾಲೋನಿ ನಿವಾಸಿಗಳು

Untitled 1 79
Photo Credit :

ಬಾಗಲಕೋಟೆ : ಎಲ್ಲೆಂದರಲ್ಲಿ ಬಿದ್ದಿರುವ ಕಸ, ಗುಂಡಿಗಳಲ್ಲಿ ಮುಳ್ಳು ಬೆಳೆದು ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಉತ್ತಮ ಚರಂಡಿಗಳಲ್ಲಿ ಕೊಳಚೆ ತುಂಬಿ ದುರ್ವಾಸನೆ ಬೀರುತ್ತಿದೆ. ಹಂದಿಗಳ ಕಾಟದಿಂದ ನಿವಾಸಿಗಳಿಗೆ ತೊಂದರೆ!! ಬಾಗಲಕೋಟೆಯ ನವನಗರದ ಸ್ಲಂ ನಿವಾಸಿಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ.

ಇಲ್ಲಿ ವಾಸಿಸುವ ಬಡವರು, ಕೂಲಿ ಕಾರ್ಮಿಕರು ದಿನನಿತ್ಯ ಬದುಕುವುದೇ ಕಷ್ಟವಾಗಿದೆ. ಮನೆಗಳ ಸುತ್ತಲೂ ಕೊಳಚೆ ಆವರಿಸಿದೆ. ಸೊಳ್ಳೆ ಹಂದಿಗಳ ಕಾಟದಿಂದ ತೊಂದರೆಯಾಗಿದೆ. ಸ್ವಚ್ಛತೆ ಇಲ್ಲದೇ ನಿತ್ಯ ಅನಾರೋಗ್ಯ ಕಾಡುತ್ತಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ನೆಮ್ಮದಿಯ ಜೀವನ ನಡೆಸುತ್ತಿಲ್ಲ.

ನಗರಸಭೆ ಸದಸ್ಯರು ಹಾಗೂ ಕಾರ್ಪೊರೇಟರ್‌ಗಳು ಈ ಪ್ರದೇಶವನ್ನು ನಿರ್ಲಕ್ಷಿಸುತ್ತಿದ್ದಾರೆ. ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ. ನವನಗರದ ಹೊರವಲಯದ ವಾಜಪೇಯಿ ಕಾಲೋನಿಯಲ್ಲಿ 650, ರಾಜೀವ್ ಗಾಂಧಿ ಕಾಲೋನಿಯಲ್ಲಿ 900, ಆಶ್ರಯ ಕಾಲೋನಿಯಲ್ಲಿ 920 ಹಾಗೂ ವಾಂಬೆ ಕಾಲೋನಿಯಲ್ಲಿ ಅಂದಾಜು 880 ಮನೆಗಳಿವೆ.  ಈ ಪ್ರದೇಶಗಳಲ್ಲಿ 5,000 ರಿಂದ 6,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸುಸಜ್ಜಿತ ಕಾಲೋನಿ ನಿರ್ಮಿಸಿಲ್ಲ, ಸಮರ್ಪಕ ಸೌಲಭ್ಯ ಕಲ್ಪಿಸಿಲ್ಲ. ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈ ಎಲ್ಲಾ ಕಾಲೋನಿಗಳಿಗೆ ಸ್ಲಂ ನಿವಾಸಿಗಳು ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ಕಳೆದ 5ರಿಂದ 6 ವರ್ಷಗಳಿಂದ ಕಾಲೊನಿ ಒಳಗಿನ ರಸ್ತೆಗಳಿಗೆ ಡಾಂಬರೀಕರಣವಾಗಿಲ್ಲ. ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪ್ರತಿನಿತ್ಯ ಬೈಕ್ ಸವಾರರು, ದ್ವಿಚಕ್ರ ವಾಹನ ಸವಾರರು, ಮಕ್ಕಳು, ವೃದ್ಧರು ಗಾಯಗೊಳ್ಳುತ್ತಿದ್ದಾರೆ. ಭಯದಿಂದಲೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಪ್ರಮುಖ ರಸ್ತೆಗಳು ಮಾತ್ರ ಸುಧಾರಣೆ ಕಂಡಿವೆ. ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಚರಂಡಿಗಳು ಕೊಳಚೆಯಿಂದ ಆವೃತವಾಗಿವೆ. ಕಸದಿಂದ ತುಂಬಿದ್ದು, ಮಳೆ ಬಂದರೆ ಚರಂಡಿಯ ಗಲೀಜು ನೀರು ರಸ್ತೆಯ ತುಂಬ ಹರಿಯುತ್ತದೆ.

ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದರಿಂದ ಇಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗಿ ದಿನನಿತ್ಯ ಆಸ್ಪತ್ರೆಗೆ ಅಲೆದಾಡುವಂತಾಗಿದೆ. 24×7 ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರೂ ಸರಿಯಾಗಿ ನೀರು ನೀಡಿಲ್ಲ. ಸಾಮಾನ್ಯ ನಲ್ಲಿಗೆ ವಾರಕ್ಕೆ ಎರಡು ಬಾರಿ ಮಾತ್ರ ಒಂದು ಗಂಟೆ ನೀರು ಹರಿಸುತ್ತಿರುವುದರಿಂದ ನೀರು ಸಾಕಾಗುತ್ತಿಲ್ಲ.

ನ್ಯೂಸ್ ಕರ್ನಾಟಕದ ಜೊತೆ ಮಾತನಾಡಿದ ಕರ್ನಾಟಕ ನಗರಸಭೆ ಆಯುಕ್ತ ವಾಸಣ್ಣ “ವಾಜಪೇಯಿ ಕಾಲೋನಿ, ರಾಜೀವ್ ಗಾಂಧಿ ಆಶ್ರಯ, ವಾಂಬೆ ಕಾಲೋನಿ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ನಾನು ಬಂದ ನಂತರ 4-5 ಬಾರಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಪ್ರತಿ ಕಾಲೋನಿಯನ್ನು ಹಂತ ಹಂತವಾಗಿ ಸ್ವಚ್ಛಗೊಳಿಸಲಾಗುವುದು. ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಸ್ವಚ್ಛತೆಯಲ್ಲಿ ನಿವಾಸಿಗಳ ಜವಾಬ್ದಾರಿಯೂ ಇದೆ. ಸ್ವಇಚ್ಛೆಯಿಂದ ಸ್ವಚ್ಛತೆ ಕಾಪಾಡಬೇಕು”ಎಂದರು.

See also  ಪಿಓಪಿ, ಬಣ್ಣದ ಗಣಪತಿ ಮೂರ್ತಿ ಬಳಕೆ ನಿರ್ಬಂಧ: ಪುರಾಣಿಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

28747
Raksha Deshpande

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು