News Kannada
Monday, September 25 2023
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ : 5 ರೂ. ಗೆ ಬಾಲಕನ ಕೊಲೆ ಮಾಡಿದ ಪಾಪಿ, ಇದೀಗ ಪೋಲಿಸರ ಅತಿಥಿ

Hubballi: Rs 5 To the murder of the boy
Photo Credit : News Kannada

ಹುಬ್ಬಳ್ಳಿ : 8 ವರ್ಷದ ಬಾಲಕ ನದೀಮ್ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕನ ಕೊಲೆ ಮಾಡಿದ್ದ ಕಿರಾತಕನನ್ನು ಖಾಕಿ ಪಡೆ ಬಂಧಿಸಿದೆ.

ಬಾಲಕ ನದೀಮ್‌ಗೆ ಶುಕ್ರವಾರ ಸಂಜೆ 5 ರೂಪಾಯಿ ಕೊಡುವ ವಿಚಾರಕ್ಕೆ ಸೆಟ್ಲಿಮೆಂಟ್‌ನ ನಿವಾಸಿ ರವಿ ಬಳ್ಳಾರಿ ಎಂಬಾತ ಮಿಲ್ಲತ್ತ ನಗರದ ಆಟದ ಮೈದಾನದ ಬಳಿ ಸಿಟ್ಟಿನಿಂದ ಕಪಾಳಕ್ಕೆ ಹೊಡೆದಿದಕ್ಕೆ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ರವಿ ಬಳ್ಳಾರಿ ಭಯದಲ್ಲಿ ನದೀಮ್ ದೇಹವನ್ನು ಹೊತ್ತುಕೊಂಡು ಮುಳ್ಳಿನ ಪೊದೆಯಲ್ಲಿ ಎಸೆದು ಬಾಲಕನ ಮುಖದ ಮೇಲೆ ಕಲ್ಲು ಹಾಕಿ ಪೈಶಾಚಿಕ ಕೃತ್ಯ ಎಸಗಿ ಪರಾರಿಯಾಗಿದ್ದ.

ಘಟನೆಯ ಕುರಿತು ಬೆಂಡಿಗೇರಿ ಠಾಣೆಯ ಪಿಎಸ್‌ಐ ಶರಣ್ ದೇಸಾಯಿ ಹಾಗೂ ಕ್ರೈಂ ಸಿಬ್ಬಂದಿ ಸುರವೇ ಪ್ರಮುಖ ಮಾಹಿತಿ ಕಲೆ ಹಾಕಿದಾಗ ರವಿ ಬಳ್ಳಾರಿ ಈ ಕೃತ್ಯ ಮಾಡಿದ್ದು ತನಿಖೆ ವೇಳೆಯಲ್ಲಿ ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧನ ಮಾಡಿ ಬೆಂಡಿಗೇರಿ ಪೊಲೀಸರು ಆರೋಪಿ ಮೆಡಿಕಲ್ ಪರೀಕ್ಷೆಗೊಳಪಡಿಸಿ ಆತನನ್ನು ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಿದ್ದಾರೆ.

See also  ಸಂಚಾರ ಪೊಲೀಸ್ ಠಾಣೆ ಎಎಸ್‌ಐ ಮೇಲೆ ವ್ಯಕ್ತಿಯಿಂದ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು