ಬೆಂಗಳೂರು : ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ 1984ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಪಿ.ರವಿ ಕುಮಾರ್ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಡಿಸೆಂಬರ್ 31, 2020ರಂದು ನಿವೃತ್ತಿಯಾಗುತ್ತಿರುವಂತ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರ ಸ್ಥಾನಕ್ಕೆ ನೂತನ ಮುಖ್ಯ ಕಾರ್ಯದರ್ಶಿಯಾಗಿ 1984ನೇ ಕರ್ನಾಟಕ ಕೆಡರ್ ಐಎಎಸ್ ಅಧಿಕಾರಿ ಪಿ.ರವಿ ಕುಮಾರ್ ಅವರನ್ನು ನೇಮಕಗೊಳ್ಳಲಿದ್ದಾರೆ. ಈ ಮೂಲಕ ಪಿ ರವಿ ಕುಮಾರ್ ಅವರು ರಾಜ್ಯದ 38ನೇ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.