News Kannada
Saturday, March 25 2023

ಬೆಂಗಳೂರು ನಗರ

ಹುಷಾರ್! ಈ ಔಷಧಿಗಳನ್ನು ಸೇವಿಸಲೇ ಬೇಡಿ..

Photo Credit :

ಬೆಂಗಳೂರು : ಆಗಾಗ್ಗೆ ಮಾರುಕಟ್ಟೆಯಲ್ಲಿರುವ ಔಷಧಿಗಳನ್ನು ಪರೀಕ್ಷೆಗೊಳಪಡಿಸಿ ಅವುಗಳಿಂದಾಗುವ ದುಷ್ಪರಿಣಾಮಗಳನ್ನು ಅರಿತು ಅವುಗಳನ್ನು ನಿಷೇಧ ಮಾಡುವುದು ನಡೆಯುತ್ತಲೇ ಇರುತ್ತದೆ.

ಇದೀಗ ಕೆಲವೊಂದು ಔಷಧಿಗಳನ್ನು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪರೀಕ್ಷೆ ನಡೆಸಿದ್ದು, ಈ ವೇಳೆ ಕೆಲವೊಂದು ಔಷಧಿಗಳು ಸೇವನೆಗೆ ಅರ್ಹವಲ್ಲ ಎಂಬುದನ್ನು ಹೊರಹಾಕಿದ್ದಾರೆ. ಹೀಗಾಗಿ ಹಲವು ಔಷಧಿಗಳನ್ನು ನಿಷೇಧಿಸಲಾಗಿದೆ.

ಹಾಗಾದರೆ ಯಾವುದು ಆ ಔಷಧಿಗಳು ಎಂಬುದನ್ನು ನೋಡಿದ್ದೇ ಆದರೆ ಅವುಗಳ ವಿವರ ಹೀಗಿದೆ.. ಲಿನ್ಸ್ ಜೆಲ್ (ಡೈಕ್ಲೋಫೆನಕ್ ಢೈಥೈಲಾಮೋನಿಯಂ, ಮಿಥೈಲ್ ಸ್ಯಾಲಿಸಿಲೇಟ್, ಮೆಂತ್ಯೋಲ್ & ಲಿನ್ಸೀಡ್ ಆಯಿಲ್ ಜೆಲ್, ಡಾಕ್ಸಿಮ್ -200 (ಸೆಫೋಡ್ಯಾಕ್ಸಿಮ್ ಡಿಸ್‍ಫಸಿಬಲ್ ಟ್ಯಾಬ್ಲೆಟ್ಸ್), ರಾಬ್‍ಜೋಲ್-20 (ರಾಬಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ), ಕ್ಯಾಲ್ಸಿರಿನ್- ಸಿಟಿ (ಸಾಫ್ಟ್‍ಜೆಲ್ ಕ್ಯಾಪ್ಸೂಲ್ಸ್ ಆಫ್ ಕ್ಯಾಲ್ಸಿಯಂ ವಿಥ್ ಕ್ಯಾಲ್ಸಿಟ್ರಿಯೋಲ್ & ಜಿಂಕ್, ಫಾಲಿಶೂರ್ (ಎಲ್- ಮಿಥೈಲ್ ಫೋಲೇಟ್, ಮಿಥೈಲ್‍ಕೋಬಾಲಮಿನ್ & ಪಿರಾಡಾಕ್ಸಲ್ -5- ಫಾಸ್ಪೇಟ್ ಕ್ಯಾಪ್ಸೂಲ್ಸ್), ಅಸೆಲೈಫ್ –ಎಸ್‍ಪಿ ಪೋರ್ಟ್ (ಅಸೆಕ್ಲೋಫೆನಕ್, ಪ್ಯಾರಸೆಟಮೋಲ್ & ಸೆರಾಟಿಯೋಫೆಪ್ಟಿಡೇಸ್ ಟ್ಯಾಬ್ಲೆಟ್ಸ್), ಕ್ಯಾಲ್ಸಿಯಂ ಕಾರ್ಬೋನೇಟ್ ವಿಥ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ, ಅಸ್ಕೋರ್ಬಿಕ್ ಆಸಿಡ್ ಟ್ಯಾಬ್ಲೆಟ್ಸ್ ಐಪಿ 500ಎಂಜಿ (ವಿಟಮಿನ್ ಸಿ ಟ್ಯಾಬ್ಲೆಟ್ಸ್) ನಾಂಡ್ರೋಲೋನ್ ಡೆಕಾನೋಟ್ ಇನ್‍ಜೆಕ್ಷನ್ ಐ.ಪಿ 50 ಎಂಜಿ/ಎಂಎಲ್ (ಡೆಕಾ- ಡುರಾಬೋಲಿನ್ 50), ಕ್ಲೋಫಿಜೆನ್ –ಎಎಸ್ 150 ಟ್ಯಾಬ್ಲೆಟ್ಸ್ (ಕ್ಲೋಫಿಡೋಗ್ರೇಲ್ ಬೈಸಲ್ಪೇಟ್ & ಆಸ್ಪಿರಿನ್ ಟ್ಯಾಬ್ಲೆಟ್ಸ್), ಡೈಕ್ಲೋಫೆನಕ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ 50ಎಂಜಿ, ಮೆಟೊಫ್ರೊಲಾಲ್ ಸಕ್ಸಿನೆಟ್ (ಇಆರ್) ಅಂಡ್ ಅಮ್ಲೋಡಿಫೈನ್ ಬೆಸಿಲೇಟ್ ಟ್ಯಾಬ್ಲೆಟ್ಸ್ (ಎಟೋಲೋಲ್- ಎಎಂ25) ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸುವ ಮೂಲಕ ಮಾರಾಟ ಮಾಡದಂತೆ ನಿರ್ಬಂಧ ಹೇರಲಾಗಿದೆ.

ಈ ಔಷಧಿ ಮತ್ತು ಕಾಂತಿವರ್ಧಕಗಳನ್ನು ನಿಷೇಧಿಸಿದ ಬಳಿಕವೂ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸದಂತೆ ಆದೇಶಿಸಲಾಗಿದೆ.

ಒಂದು ವೇಳೆ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಈ ಮೇಲಿನ ‍ಔಷಧಿಗಳನ್ನು ಉಪಯೋಗಿಸದಿರುವುದು ಒಳಿತು. ಹೀಗೊಂದು ವೇಳೆ ವೈದ್ಯರು ಅಥವಾ ಮಾರಾಟಗಾರರು ಈ ನಿಷೇಧಿತ ಔಷಧಿಗಳನ್ನು ನೀಡಿದ್ದೇ ಆದರೆ ಸಂಬಂಧಪಟ್ಟ ಸಹಾಯಕ ಔಷಧ ನಿಯಂತ್ರಕರಿಗೆ ದೂರು ನೀಡಬೇಕಾಗಿದೆ.

See also  ನಾದಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು