News Kannada
Saturday, September 23 2023
ಬೆಂಗಳೂರು ನಗರ

ಬೆಂಗಳೂರು: ರಾಯರ ಮಧ್ಯಾರಾಧನೆ- ಬೃಂದಾವನಕ್ಕೆ ನೂತನ “ನವರತ್ನ ಕವಚ”ಸಮರ್ಪಣೆ

Bengaluru: Dedication of new 'Navaratna Kavacha' to Brindavana - The Mid-Day Aradhana of Rayas
Photo Credit : News Kannada

ಬೆಂಗಳೂರು: ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 351 ನೇ “ಮಧ್ಯಾರಾಧನೆ” ಪ್ರಯುಕ್ತ ಪರಮ ಪೂಜ್ಯ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪೂಜಿಸಿ ಶ್ರೀಮನ್ ಮೂಲ ರಾಮದೇವರಿಗೆ ಸಮರ್ಪಿಸಿದ ನೂತನ ನವರತ್ನ ಕವಚವನ್ನು “ಮಧ್ಯಾರಾಧನೆ” ಪ್ರಯುಕ್ತ ಶ್ರೀ ಗುರುರಾಯರ ಬೃಂದಾವನಕ್ಕೆ ಸಮರ್ಪಿಸಿ ಅಲಂಕರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು ಮಾತನಾಡುತ್ತಾ ಈ ಮಹತ್ತರವಾದ ಕಾರ್ಯವನ್ನು ಪರಮಪೂಜ್ಯ ಶ್ರೀ ಸುಬುಧೇದ್ರ ತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಭಕ್ತರ ಸಹಕಾರದೊಂದಿಗೆ ರಾಯರ 351ನೇ ಆರಾಧನೆಯ ಈ ಶುಭ ಸಂದರ್ಭದಲ್ಲಿ ಸಮರ್ಪಿಸಲಾಯಿತು.

ಭಕ್ತಾದಿಗಳು ಗುರುಗಳ ಸನ್ನಿಧಿಗೆ ಆಗಮಿಸಿ ರಾಯರ ದರ್ಶನ ಒಕ್ಕೂಟ ಪಡೆದು ಪ್ರಸಾದವನ್ನು ಸ್ವೀಕರಿಸಿ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ ಎಂದು ತಿಳಿಸಿದರು.

See also  ಚಾರ್ಮಾಡಿ ಘಾಟ್: ಅಪಾಯಕಾರಿ ಕಣಿವೆಗಳೊಂದಿಗೆ ಅಪೂರ್ವ ಸೌಂದರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು