ಕಾಸರಗೋಡು: ಜ್ಯೂವೆಲ್ಲರಿಯ ಗೋಡೆ ಕನ್ನ ಕೊರೆದು ಚಿನ್ನಾಭರಣ ಮತ್ತು ನಗದು ದರೋಡೆಗೈದ ಘಟನೆ ಬಂದಡ್ಕದಲ್ಲಿ ನಡೆದಿದೆ.
ಒಂದು ಕಿಲೋ ಚಿನ್ನಾಭರಣ ಹಾಗೂ ನಾಲ್ಕೂವರೆ ಕಿಲೋ ಬೆಳ್ಳಿ ಹಾಗೂ ನಗದನ್ನು ಕಳವು ಮಾಡಲಾಗಿದೆ.
ಬಂದಡ್ಕದ ಅಶೋಕ್ ಮಾಲಕತ್ವದ ಸುಮಂಗಲಿ ಜುವೆಲ್ಲರಿಯಲ್ಲಿ ಕಳವು ನಡೆದಿದೆ.
ಶಟರ್ ತೆಗೆದಾಗ ಹಿಂಬದಿಯ ಗೋಡೆ ಕೊರೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಚಿನ್ನಾಭರಣದ ಲಾಕರ್ ಒಡೆಯಲಾಗಿದ್ದು, ಚಿನ್ನಾಭರಣ ಇಟ್ಟಿದ್ದ ಟ್ರೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ.
ಬೆರಳಚ್ಚು ತಜ್ಞರು, ಶ್ವಾನದಳ ತಲುಪಿದ ಬಳಿಕವೇ ಜ್ಯುವೆಲ್ಲರಿಯೊಳಗೆ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಅಶೋಕ್ ರವರ ಮಾಲಕತ್ವದ ಸುಮಂಗಲಿ ಜ್ಯೂವೆಲ್ಲರಿಯಲ್ಲಿ ದರೋಡೆ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದರೂ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.