News Kannada
Sunday, March 26 2023

ಕರಾವಳಿ

ಸರ್ಕಾರಿ ನಾಮಫಲಕದ ಮೇಲೆ ಗಡಾಯಿಕಲ್ಲು ಹೆಸರನ್ನು ಅಳಿಸಿದ ಕಿಡಿಗೇಡಿಗಳು!

Photo Credit :

ಸರ್ಕಾರಿ ನಾಮಫಲಕದ ಮೇಲೆ ಗಡಾಯಿಕಲ್ಲು ಹೆಸರನ್ನು ಅಳಿಸಿದ ಕಿಡಿಗೇಡಿಗಳು!

ಬೆಳ್ತಂಗಡಿ: ನಡ ಗ್ರಾಮದಲ್ಲಿರುವ ಇಂದಬೆಟ್ಟು ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು ಎಂಬಲ್ಲಿನ ಸರಕಾರೀ ನಾಮಫಲಕಗಳ ಮೇಲೆ ನರಸಿಂಹ ಗಡ ಎಂಬ ಮೂಲ ಹೆಸರನ್ನು ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗಡಾಯಿಕಲ್ಲಿಗೆ ಹೋಗುವ ಎರಡು ಕಿ.ಮೀ ಮೊದಲು ಅರಣ್ಯ ಇಲಾಖೆಯವರು ಜಮಲಾಬಾದ್ ಕೋಟೆಗೆ ದಾರಿ ಎಂದು ಬರೆದಿರುವ ನಾಮಫಲಕದ ಮೇಲೆ ನರಸಿಂಹ ಗಡ ಎಂದು ಕಪ್ಪು ಬಣ್ಣದಿಂದ ಬರೆಯಲಾಗಿದೆ. ಇನ್ನೊಂದೆಡೆ ಲೋಕೋಪಯೋಗಿ ಇಲಾಖೆಯವರ ನಾಮಫಲಕದಲ್ಲಿದ್ದ ಜಮಲಾಬಾದ್ ಎಂಬ ಹೆಸರಿನ ಮೇಲೆಯೂ ನರಸಿಂಹ ಗಡ ಎಂದು ತಿದ್ದಲಾಗಿದೆ. ಇಷ್ಟೇ ಅಲ್ಲದೆ ಜಮಲಾಬಾದ್ ಎರಡು ಕಿ.ಮೀ ಎಂದು ಸೂಚಿಸುವ ರಸ್ತೆ ಬದಿಯ ಮೈಲುಗಲ್ಲಿನ ಮೇಲೆಯೂ ಹೆಸರನ್ನು ತಿದ್ದಿ ನರಸಿಂಹ ಗಡ ಎಂದು ಬರೆಯಲಾಗಿದೆ.

ಈ ರೀತಿ ಮಾಡಿರುವ ಉದ್ದೇಶ ಏನು ಎಂಬುದು ನಿಗೂಢವಾಗಿದೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಸಂಶಯ ಪಡುವಂತಾಗಿದೆ. ಸ್ಥಳೀಯ ಪೋಲಿಸರು ಭೇಟಿ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

See also  ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದ ಕಾಂಗ್ರೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು