News Kannada
Tuesday, March 28 2023

ಕರಾವಳಿ

ಒಂದೇ ರಾತ್ರಿಯಲ್ಲಿ ಎರಡೂ ದೇವಸ್ಥಾನದಲ್ಲಿ ಕಳವು

Photo Credit :

ಒಂದೇ ರಾತ್ರಿಯಲ್ಲಿ ಎರಡೂ ದೇವಸ್ಥಾನದಲ್ಲಿ ಕಳವು

ಉಡುಪಿ/ಕುಂದಾಪುರ: ಒಂದೇ ರಾತ್ರಿ ಎರಡು ದೇವಸ್ಥಾನಗಳಿಗೆ ಕಳ್ಳರು ನುಗ್ಗಿದ ಘಟನೆ ಕುಂದಾಪುರದ ಹೊಸಂಗಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಹೊಸಂಗಡಿ ಗ್ರಾಮದ ಎರಡು ದೇವಸ್ಥಾನಗಳ ಮುಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ದೇವರಿಗೆ ಅಲಂಕರಿಸಿದ ಬೆಳ್ಳಿಯ ಸೊತ್ತು ಹಾಗೂ ಕಾಣಿಕೆ ಹುಂಡಿಗಳನ್ನು ದೋಚಿ ಪರಾರಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

ಕೇವಲ ಅರ್ಧ ಕಿ.ಮೀ ಅಂತರದಲ್ಲಿರುವ ಕೆರೆಕಟ್ಟೆ ವಿರೂಪಾಕ್ಷ ಹಾಗೂ ಶ್ರೀ ಶಾಂತೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ವಿರೂಪಾಕ್ಷ ದೇವಾಲಯದ ದೇವರ ಕಾಣಿಕೆ ಹುಂಡಿಯನ್ನು ಸಮೀಪದ ರಸ್ತೆ ಬದಿಯಲ್ಲಿ ಎಸೆದಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಎಷ್ಟು ಹಣವಿತ್ತು ಎಂಬ ಮಾಹಿತಿ ಇಲ್ಲ.

ಶ್ರಾವಣ ಮಾಸ ಪ್ರಯುಕ್ತ ದೇವಾಲಯಗಳಲ್ಲಿ ಸೋಣೆಯಾರತಿ ಪೂಜೆ ನಡೆದಿದ್ದು, ರಾತ್ರಿ ದೇವರಿಗೆ ಅಲಂಕಾರ ಮಾಡಿದ ವಸ್ತುಗಳನ್ನು ಮತ್ತು ಕಾಣಿಕೆ ಡಬ್ಬವನ್ನು ದೇವಾಲಯದಲ್ಲಿ ಇಟ್ಟು ಅರ್ಚಕರು ಮನೆಗೆ ಹೋಗಿದ್ದ ಸಮಯದಲ್ಲಿ ಕಳ್ಳರು ಒಳನುಗ್ಗಿದ್ದರು. ದೇವರ ವಿಗ್ರಹದ ಬೆಳ್ಳಿಯ ದೃಷ್ಟಿಯನ್ನು ಕಳ್ಳತನ ಮಾಡಿದ್ದಾರೆ.

ಡಿವೈಎಸ್ಪಿ ದಿನೇಶ್ ಕುಮಾರ್ ಬಿ.ಪಿ., ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್., ಅಮಾಸೆಬೈಲು ಠಾಣಾಧಿಕಾರಿ ಶೇಖರ್ ಹಾಗೂ ಸಿಬಂದಿ, ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಏಕಕಾಲದಲ್ಲಿ ಒಂದೇ ಊರಿನ ಎರಡು ದೇವಸ್ಥಾನಗಳಲ್ಲಿ ಕಳವು ನಡೆದಿರುವುದು ಊರವರಿಗೆ ಅಚ್ಚರಿ ಮೂಡಿಸಿದೆ.

See also  ಬಿಜೆಪಿ ಬೆಳ್ತಂಗಡಿ ಮಂಡಲ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿದ ಮಾಜಿ ಶಾಸಕ ಪ್ರಭಾಕರ ಬಂಗೇರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

192
Shreyas Vittal

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು