News Kannada
Friday, March 31 2023

ಕಾಸರಗೋಡು

ಕಾಸರಗೋಡು : ಮಾರಕಾಸ್ತ್ರ ಗಳಿಂದ ಕೊಚ್ಚಿ, ಸಿಪಿಎಂ ಕಾರ್ಯಕರ್ತನ ಕೊಲೆ

Photo Credit : News Kannada
ಕಾಸರಗೋಡು : ಸಿಪಿಎಂ ಕಾರ್ಯಕರ್ತರೋರ್ವ ರನ್ನು ಮಾರಕಾಸ್ತ್ರ ಗಳಿಂದ  ಕೊಚ್ಚಿಕೊಲೆಗೈದ ದಾರುಣ ಘಟನೆ ತಲಶ್ಯೇರಿ ಸಮೀಪದ  ಪುನ್ನಾಳ್ ಎಂಬಲ್ಲಿ  ಸೋಮವಾರ ಮುಂಜಾನೆ  ನಡೆದಿದೆ.
ಸಿಪಿಎಂ ಕಾರ್ಯಕರ್ತ ಹರಿದಾಸನ್ ( ೫೪) ಮೃತಪಟ್ಟವರು. ಕೃತ್ಯದ ಹಿಂದೆ ಆರ್ ಎಸ್  ಎಸ್  – ಬಿಜೆಪಿ ಕೈವಾಡ ಇದೆ ಎಂದು ಸಿಪಿಎಂ ಆರೋಪಿಸಿದ್ದು , ತಲಶ್ಯೇರಿ  ನಗರಸಭೆ  ಹಾಗೂ ನ್ಯೂ  ಮಾಹೆ  ಗ್ರಾಮ ಪಂಚಾಯತ್ ವ್ಯಾಪ್ತಿ  ಯಲ್ಲಿ ಇಂದು ಹರತಾಳಕ್ಕೆ ಕರೆ ನೀಡಿದೆ.
ಸಿಪಿಎಂ ನ ಸಕ್ರಿಯ    ಕಾರ್ಯಕರ್ತ ರಾ ಗಿದ್ ಹರಿದಾಸನ್ ರವರು ಮೀನುಗಾರರಾಗಿದ್ದರು ,ಮುಂಜಾನೆ  ಕೆಲಸ ಮುಗಿಸಿ ಮನೆ ಮರಳುತ್ತಿದ್ದಾಗ ಮನೆ ಸಮೀಪ ಹೊಂಚು ಹಾಕಿ ಕುಳಿತಿದ್ದ  ತಂಡವು  ದಾಳಿ ನಡೆಸಿದ್ದು  ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ತಂಡವು ವಾಹನ ದಲ್ಲಿ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಹರಿದಾಸನ್ ರವರನ್ನು ಪರಿಸರವಾಸಿಗಳು ಆಸ್ಪತ್ರೆಗೆ  ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.  ಎರಡು ಬೈಕ್ ಗಳಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ  ಎನ್ನಲಾಗಿದೆ . ಹರಿದಾಸನ್ ರ ಒಂದು ಕಾಲನ್ನು ದುಷ್ಕರ್ಮಿ ಗಳು ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ .   ಬೊಬ್ಬೆ ಕೇಳಿ    ಸ್ಥಳಕ್ಕೆ ತಲಪಿದ್ದ ಸಹೋದರ ನ ಮೇಲೂ  ಹಲ್ಲೆ ನಡೆಸಲಾಗಿದೆ. ಒಂದು ವಾರದ ಹಿಂದೆ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ  ಪುನ್ನಾಳ್ ನಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದರ ಪುನರಾವರ್ತನೆ ಈ  ಕೊಲೆಗೆ ಕಾರಣ ವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳದ ಪರಿಸರದಲ್ಲಿ ಪೊಲೀಸರು ಬಂದೋಬಸ್ತ್ ತೆಗೆದುಕೊಂಡಿದ್ದು , ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ
See also  ಕಾಸರಗೋಡು: ಇಂದು 1,029 ಮಂದಿಗೆ ಕೊರೋನ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು