News Kannada
Friday, March 24 2023

ಕಾಸರಗೋಡು

ಕಾಸರಗೋಡು: ಹೊಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಬಾಲಕನನ್ನು ರಕ್ಷಿಸಿದ 8ವರ್ಷದ ಬಾಲಕ

Kasargod: An 8-year-old boy rescued a boy from a stream in Kasargod.
Photo Credit : By Author

ಕಾಸರಗೋಡು: ಸ್ನಾನಕ್ಕಿಳಿದ ಸಂದರ್ಭದಲ್ಲಿ ಹೊಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ 11 ವರ್ಷದ ಬಾಲಕನನ್ನು ಎಂಟು ವರ್ಷದ ಬಾಲಕ ರಕ್ಷಿಸಿದ ಘಟನೆ ಅಡೂರು ಸಮೀಪದ ಪಳ್ಳಂಗೋಡು ಎಂಬಲ್ಲಿ ನಡೆದಿದೆ.

ಪಯಸ್ವಿನಿ ಹೊಳೆಯ ಪಳ್ಳಂಗೋಡು ಎಂಬಲ್ಲಿ ಹೊಳೆಗಿಳಿದಿದ್ದ 11 ವರ್ಷದ ಸ್ಥಳೀಯ ಬಾಲಕ ಮೇಲಕ್ಕೆ ಬರಲಾರದೆ ಒದ್ದಾಡುತ್ತಿದ್ದು , ಇದನ್ನು ಗಮನಿಸಿದ ಮುಹಮ್ಮದ್ ಹಿಬಾತುಲ್ಲ ಎಂಬ ಬಾಲಕ ಸಾಹಸಮಯವಾಗಿ ಬಾಲಕನನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾನೆ.

ಪಳ್ಳಂಗೋಡಿನ ಇಬ್ರಾಹಿಂ ಹಸೀಬ್-ಬುಶ್ರಾ ದಂಪತಿಯ ಪುತ್ರನಾಗಿರುವ ಮುಹಮ್ಮದ್‌ ಹಿಬಾತುಲ್ಲ ಪಳ್ಳಂಗೋಡು ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಬಾಲಕ ಹಿಬಾತುಲ್ಲನ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಇದಕ್ಕಾಗಿ ಬಾಲಕನಿಗೆ ಸಾರ್ವಜನಿಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.

See also  ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲ ವಿದ್ಯಾರ್ಥಿಗಳಿಗಾಗಿ ಪ್ರತಿಪದಾನಂದ ಸಂಗೀತೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು