ಬೆಳ್ತಂಗಡಿ: ನಾರಾವಿಯ ಪಾರಿಜಾತ ಕಾಂಪ್ಲೆಕ್ಸ್ನಲ್ಲಿದ್ದ ಶ್ರೀನಿಧಿ ಮೊಬೈಲ್ ಸೆಂಟರ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ರಿಮಾಂಡ್ ಹೋಮ್ಗೆ ಕಳುಹಿಸಲಾಗಿದೆ.
ಅಂಗಡಿ ಮಾಲಿಕ ಈದು ಗ್ರಾಮದ ಹರಿಪ್ರಸಾದ್ ಶೆಟ್ಟಿ ಅವರು ನ.೨೨ರಂದು ಬೆಳಿಗ್ಗೆ ಅಂಗಡಿಗೆ ಬಂದಾಗ ಶಟರ್ಗೆ ಹಾಕಿದ್ದ ಬೀಗ ಒಡೆದಿರುವುದು ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ ಒಳಗಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಸಿಸಿಟಿವಿ ಒಡೆದಿರುವುದು ಕಂಡು ಬಂದಿದೆ. ಹೊಸ ಮೊಬೈಲ್ಗಳು ಹಾಗೂ ರಿಪೇರಿಗೆ ಬಂದಿದ್ದ ಒಟ್ಟು ರೂ. ೩೪೦೦೦ ಮೌಲ್ಯದ ಮೊಬೈಲ್ ಕಳವಾಗಿರುವ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.