News Kannada
Saturday, April 01 2023

ಮಂಗಳೂರು

ಅಹಾನ್ ಶೆಟ್ಟಿ ಅಭಿನಯದ ‘ತಡಪ್’ ಸಿನಿಮಾ ರಿಲೀಸ್: ದೇವರುಗಳ ಆಶೀರ್ವಾದ ಪಡೆಯಲು ಮಂಗಳೂರಿಗೆ ಬಂದ ನಟ ಸುನೀಲ್ ಶೆಟ್ಟಿ

Photo Credit :

ಮಂಗಳೂರು: ಕೊರೋನಾ ಲಾಕ್‌ಡೌನ್ ಬಳಿಕ ಇದೀಗ ನನ್ನ ಪುತ್ರ ಅಭಿನಯಿಸಿರುವ ‘ತಡಪ್’ ಹಿಂದಿ ಚಲನಚಿತ್ರ ಡಿ.೩ರಂದು ಬಿಡುಗಡೆಗೊಳ್ಳುತ್ತಿದೆ. ಜನ ಇಷ್ಟಪಟ್ಟು ನನ್ನ ಸಿನಿಮಾ ವೀಕ್ಷಣೆಗೆ ಬರುತ್ತಾರೆ. ನನಗೆ ಇಂಡಸ್ಟ್ರಿಯಲ್ಲಿ ನೀಡಿದ ಪ್ರೋತ್ಸಾಹವನ್ನೇ ಪುತ್ರನಿಗೂ ಪ್ರೇಕ್ಷಕರು ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದರು.

ಡಿ.೩ರಂದು ಪುತ್ರ ಅಹಾನ್ ಶೆಟ್ಟಿ ಅವರ ‘ತಡಪ್’ ಹಿಂದಿ ಚಲನಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋವಿಡ್ ಕಾರಣದಿಂದ ತಡಪ್ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದ್ದ ಸಂದರ್ಭ ಒಟಿಟಿ ಮೂಲಕ ಬಿಡುಗಡೆ ಮಾಡಬೇಕು ಎಂದು ಅನೇಕ ಆಫರ್‌ಗಳು ಬಂದಿದ್ದವು. ಆದರೆ ನಾವು ದೊಡ್ಡ ಸ್ಕ್ರೀನ್‌ನಲ್ಲೇ ಪುತ್ರನ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಆಶಯದಿಂದ ಇಷ್ಟು ಸಮಯ ಕಾದು ಇದೀಗ ಮುಹೂರ್ತ ಫಿಕ್ಸ್ ಮಾಡಿದ್ದೇವೆ. ವಿಶ್ವದ ವಿವಿಧ ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ ಎಂದರು.

ಒಬ್ಬ ತುಳುವನಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ತುಳು ಸಂಸ್ಕೃತಿಯೇ ಅಂತದ್ದು. ನಮ್ಮನ್ನು ಎಲ್ಲಿ ಬೇಕಾದರೂ ಬೆಳೆಸುತ್ತದೆ. ನಮ್ಮ ಹಿರಿಯರು ಕೂಡಾ ಅದೇ ಹಾದಿಯಲ್ಲಿ ಬೆಳೆದು ಬಂದವರು. ನನ್ನ ಪುತ್ರನನ್ನು ಕೂಡಾ ಹಾಗೆಯೇ ಬೆಳೆಸಿದ್ದೇನೆ. ಆದರೆ ಆತನಿಗೆ ತುಳು ಭಾಷೆ ಬರುವುದಿಲ್ಲ. ಕಾರಣ ಆತನ ಅಮ್ಮನಿಗೆ ತುಳು ಗೊತ್ತಿಲ್ಲ. ಅದಕ್ಕಾಗಿ ಮನೆಯಲ್ಲಿ ನಾವು ತುಳು ಮಾತನಾಡದ ಕಾರಣಕ್ಕೆ ಪುತ್ರ ತುಳು ಕಲೀಲಿಲ್ಲ. ಆದರೆ ನಮ್ಮ ಸಂಸ್ಕೃತಿಯನ್ನು ಆತ ಚೆನ್ನಾಗಿ ಮೆಚ್ಚಿಕೊಂಡಿದ್ದಾನೆ. ಅದೇ ಕಾರಣಕ್ಕಾಗಿ ಸಿನಿಮಾ ಬಿಡುಗಡೆ ಮುಂಚೆ ತುಳುನಾಡಿದ ಆರಾಧ್ಯ ದೈವ, ದೇವರುಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದರು.

ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ, ಸಿನಿಮಾ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ದೇವಾನಂದ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್‌ಬೈಲ್ ಉಪಸ್ಥಿತರಿದ್ದರು

See also  ಹೊಸ ವರ್ಷಕ್ಕೆ ಮಂಗಳೂರು ಎರಡು ರೈಲುಗಳ ಪುನರಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು