News Kannada
Wednesday, March 22 2023

ಮಂಗಳೂರು

ಬೆಳ್ತಂಗಡಿ: ೨೦.೩೬ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

Photo Credit :

ಬೆಳ್ತಂಗಡಿ: ಕುಸಿದು ಬಿದ್ದು ಸಂಪರ್ಕ ಕಡಿದುಕೊಂಡ ಕುತ್ಲೂರು ಸೇತುವೆ ಒಂದೇ ವರ್ಷದಲ್ಲಿ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಉಳಿದಂತೆ ನಾರಾವಿ ಭಾಗದ ಸರ್ವಋತು ಅಭಿವೃದ್ಧಿಗೆ ಆದ್ಯತೆ ನೀಡಿದ ಪರಿಣಾಮ ನಾರಾವಿ ಗ್ರಾ.ಪಂ. ವ್ಯಾಪ್ತಿಯೊಂದಕ್ಕೆ ಸುಮಾರು ೧೭ ಕೋ.ರೂ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವತಿಯಿಂದ ಬೆಳ್ತಂಗಡಿ ತಾಲೂಕಿನ ಒಟ್ಟು ೧೧ ಕಡೆಗಳಲ್ಲಿ ಹಮ್ಮಿಕೊಳ್ಳಲುದ್ದೇಶಿಸಿದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಿ.೧೭ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ತಾಲೂಕಿನ ೮೧ ಗ್ರಾಮಗಳಿಗೆ ಸಾವಿರಾರು ಕೋ.ರೂ. ಅನುದಾನ ತರುವ ಮೂಲಕ ರಾಜ್ಯದಲ್ಲೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರವು ಅತೀ ಹೆಚ್ಚು ಅನುದಾನ ತಂದಿರುವ ಕ್ಷೇತ್ರವಾಗಿದೆ. ರಸ್ತೆ, ಕಿಂಡಿಅಣೆಕಟ್ಟು, ಕೈಗಾರಿಕಾ ಕ್ಷೇತ್ರ, ನೀರಾವರಿ ಸೌಲಭ್ಯ ಪೂರಕ ಯೋಜನೆಗಳನ್ನು ತಾಲೂಕು ಕಾಣುವಂತಾಗಲು ಗ್ರಾಮಸ್ಥರ ಬೆಂಬಲ ಅಗತ್ಯ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ವಿಠಲ ಸಿ. ಪೂಜಾರಿ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾ ರಮೇಶ್, ಪಡಂಗಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ವೇಣೂರು ಗ್ರಾ.ಪಂ.ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ನಾರಾವಿ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ, ಬಿಜೆಪಿ ಮುಖಂಡ ಶ್ರೀನಿವಾಸ ಕಿಣಿ, ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶೇಖರ ಹೆಗ್ಡೆ, ಮರೋಡಿ ಗ್ರಾ.ಪಂ. ಅಧ್ಯಕ್ಷೆ ಪದ್ಮಶ್ರೀ ಜೈನ್, ಹಿರಿಯರಾದ ಡಾಕಯ್ಯ ಪೂಜಾರಿ, ಬಳೆಂಜ ಗ್ರಾ.ಪಂ. ಅಧ್ಯಕ್ಷೆ ಹೇಮಂತ ಪೂಜಾರಿ, ಕುವೆಟ್ಟು ಆಶಾಲತಾ, ಕೊಯ್ಯೂರು ಗ್ರಾ.ಪಂ ಅಧ್ಯಕ್ಷ ಜಗನ್ನಾಥ, ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ಅಭಿವೃದ್ಧಿ ಕಾಮಗಾರಿ ವಿವರ
ಮರೋಡಿ ಗ್ರಾಮದ ಕುಂಜೋಡಿ-ನಾರಾವಿ ರಸ್ತೆ ಡಾಮರೀಕರಣ-೧.೩೮ ಕೋ.ರೂ., ಹೊಸಂಗಡಿ ಗ್ರಾಮದ ಪಣಿಮೇರು-ಆರಂಬೋಡಿ ರಸ್ತೆ ಡಾಮರೀಕರಣ-೭೫.೩೦ ಲಕ್ಷ ರೂ., ವೇಣೂರು ಗ್ರಾಮದ ಬಡಾರ ರಸ್ತೆ ಮರು ಡಾಮರೀಕರಣ-೧ ಕೋ.ರೂ., ಬಳೆಂಜ ಗ್ರಾಮದ ತಾರದಡ್ಡ-ನಿಟ್ಟಡೆ ಬೊಳ್ಳಜೆ ರಸ್ತೆ ಅಭಿವೃದ್ಧಿ-೨ ಕೋ.ರೂ., ಪಡಂಗಡಿ ಗ್ರಾಮದ ಪುತ್ತೆಯಿಂದ-ಕುದುರೆಂಜ ಸಂಪರ್ಕ ರಸ್ತೆ ಅಭಿವೃದ್ಧಿ-೧.೫೦ ಕೋ.ರೂ., ಪಣಕಜೆ-ಅಂಬೆಟ್ಟು-ಬಳ್ಳಮಂಜವರೆಗೆ ರಸ್ತೆ ಅಭಿವೃದ್ಧಿ-೪ ಕೋ.ರೂ., ಬಾರ್ಯ ಮೂರುಗೊಳಿ-ಪಂಚಲಾಜೆ ಪ.ಜಾ. ಕಾಲೊನಿ ಸಂಪರ್ಕ ರಸ್ತೆ ಅಭಿವೃದ್ಧಿ-೨ ಕೋ.ರೂ., ಪುತ್ತಿಲ ಗ್ರಾಮದ ಹೇರಾಜೆ ಸಂಪರ್ಕ ರಸ್ತೆ ಅಭಿವೃದ್ಧಿ- ೧.೫೦ ಕೋ.ರೂ., ಬಾರ್ಯ ಗೋದಾಮು ಗುಡ್ಡೆ ರಸ್ತೆ ಮರುಡಾಮರೀಕರಣ-೯೮ ಲಕ್ಷ ರೂ., ಬಾರ್ಯ ಕುಟ್ಟಿಕಳದಿಂದ ಪೆದಮಲೆ ರಸ್ತೆ ಮರು ಡಾಮರೀಕರಣ-೧.೨೫ ಕೋ.ರೂ., ಕೊಯ್ಯೂರು ಬಜಿಲವರೆಗೆ ರಸ್ತೆ ಅಭಿವೃದ್ಧಿ- ೪ ಕೋ.ರೂ. ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

See also  ಜನವರಿ 8, 9 ರಂದು ಉಜಿರೆಯಲ್ಲಿ ಅಭಾಸಾಪದ ಕಾರ್ಯಕರ್ತರ ಕೃತಿಗಳ ಮಾರಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು