News Kannada
Thursday, October 05 2023
ಮಂಗಳೂರು

ಮಂಗಳೂರು: ಜಾನುವಾರುಗಳ ಕುರ್ಬಾನಿ, ಬಲಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಗ್ರಹ

VHP has demanded strict implementation of the Prevention of Qurbani and Sacrifice of Cattle Act.
Photo Credit : News Kannada

ಮಂಗಳೂರು: ಜಾನುವಾರುಗಳನ್ನು ಕುರ್ಬಾನಿ ಹಾಗೂ ಬಲಿ ನೀಡಲು ನಿಷೇಧವಿರುವ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇರುವ ವಿಎಚ್ ಪಿ ಆಗ್ರಹಿಸಿದೆ.

ವಿಎಚ್ ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ ಮಾತನಾಡಿ, ಜಾನುವಾರುಗಳನ್ನು ಕುರ್ಬಾನಿ ಹಾಗೂ ಬಲಿಗಾಗಿ ಸಾಗಾಟವನ್ನು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಕ್ರಮವಾಗಿ ಸಾಗಾಟ ಮಾಡುವ ಚಾಲಕರು, ಜಾನುವಾರು ಮಾಲಕರು ಹಾಗೂ ವಾಹನ ವಾಹನದ ಮಾಲಕರು ಅಪರಾಧಿಗಳಾಗುತ್ತಾರೆ. ಇಂತಹ ಅಕ್ರಮ ಜಾನುವಾರು ಸಾಗಾಟ ಮಾಡುವವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವುದು ಮಾತ್ರವಲ್ಲ, ಸಾರ್ವಜನಿಕರು ಅದನ್ನು ತಡೆದು ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಅವಕಾಶವಿದೆ. ಅಲ್ಲದೆ ಅಕ್ರಮ ಗೋಸಾಗಾಟಗಾರರ ಬಗ್ಗೆ ಮಾಹಿತಿ ದೊರೆತಲ್ಲಿ 112 ಅಥವಾ ಆ್ಯನಿಮಲ್ ಹೆಲ್ಪ್ ಲೈನ್ 2277100200 ಗೆ ಕರೆ ಮಾಡಿ ತಿಳಿಸಬಹುದು‌ ಎಂದು ಹೇಳಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ರನ್ವಯ 13 ವರ್ಷದೊಳಗಿನ ಜಾನುವಾರುಗಳನ್ನು ಬಲಿ, ಕುರ್ಬಾನಿ ಮಾಡಲು ಅವಕಾಶವಿಲ್ಲ‌. ಈ ಅಪರಾಧ ಸಾಬೀತಾದಲ್ಲಿ ಸೆಕ್ಷನ್ 12ರ ಪ್ರಕಾರ 3-7 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ನಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗಿತ್ತದೆ.

ಈ ಅಪರಾಧ ಮರುಕಳಿಸಿದ್ದಲ್ಲಿ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ ಬಲಿ ಕೊಟ್ಟ ಸ್ಥಳವನ್ನು ಮುಟ್ಟುಗೋಲು ಮಾಡಬಹುದು. ಅವರ ಮೇಲಿನ ಅಪರಾಧ ಸಾಬೀತಾದಲ್ಲಿ ಈ ಸ್ಥಳವು ಶಾಶ್ವತವಾಗಿ ಮುಟ್ಟುಗೋಲು ಹಾಕಲಾಗುತ್ತದೆ ಎಂದು ವಿಎಚ್ ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ ಹೇಳಿದರು.

See also  ಬೆಳ್ತಂಗಡಿ; ಪ್ರಧಾನಿ ಮೋದಿಯವರ 8 ನೇ ವರ್ಷದ ಆಡಳಿತ ಸಂಭ್ರಮಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು