News Kannada
Wednesday, March 22 2023

ಮಂಗಳೂರು

ಬಂಟ್ವಾಳ: ಸಾಹಿತ್ಯದ ಮೂಲಕ ಸ್ವಚ್ಛತೆ ಅರಿವು ಹಾಗೂ ಕವಿಗೋಷ್ಠಿ ಕಾರ್ಯಕ್ರಮ

Bantwal: Cleanliness awareness through literature and kavi sammelan programme
Photo Credit : By Author

ಬಂಟ್ವಾಳ: ಕವಿ ಮನಸ್ಸುಗಳು ಹೆಚ್ಚಾದಾಗ ಸಮಾಜ ಸ್ವಚ್ಛತೆಯ ಕಡೆಗೆ ಸಾಗುತ್ತದೆ. ಕವಿತೆ, ಕಾವ್ಯ, ಸಾಹಿತ್ಯ ಎನ್ನುವುದು ಜನರ ಮನಸ್ಸನ್ನು ಅರಳಿಸಿ ಬದುಕನ್ನು ಚೆನ್ನಾಗಿ ಆಸ್ವಾಧ್ವಿಸುವ ಶಕ್ತಿ ನೀಡುತ್ತದೆ ಎಂದು ಸಾಹಿತಿ ರಘ ಇಡ್ಕಿದು ಹೇಳಿದರು.

ಅವರು ಗುರುಕುಲ ಕಲಾ ಪ್ರತಿಷ್ಠಾನ (ರಿ) ದ.ಕ. ಜಿಲ್ಲಾ ಘಟಕ ವತಿಯಿಂದ ಪುದು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಸಭಾಭವನದಲ್ಲಿ ನಡೆದ ಸಾಹಿತ್ಯದ ಮೂಲಕ ಸ್ವಚ್ಛತೆ ಅರಿವು ಹಾಗೂ ಕವಿಗೋಷ್ಟಿ ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯದ ಮೂಲಕ ಸ್ವಚ್ಛತೆ ಎಂದರೆ ಸ್ವಚ್ಛ ಹಾಗೂ ಸ್ವಸ್ಥ ಸಮಾಜದ ನಿರ್ಮಾಣವೆ ಆಗಿದೆ.‌ನಮ್ಮ ನಡೆ ನುಡಿಗಳು ಸ್ವಚ್ಛ ವಾಗಿದ್ದಾಗ ಬಸವಣ್ಣ ಹೇಳುವ ದೇಹವೇ ದೇಗುಲ ರೂಪು ಪಡೆಯುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಸುರೇಶ ನೆಗಳಗುಳಿ ಮಾತನಾಡಿ, ಸಾಹಿತ್ಯದ ಮೂಲಕ ಸ್ವಚ್ಛತೆ ಅರಿವು ನಮ್ಮೊಳಗಿನ‌ ಕೆಟ್ಟ ಆಲೋಚನೆಗಳನ್ನು ದೂರ ಮಾಡುವಂತಾಗಲಿ ಎಂದರು. ಕವಿಗಳಾದ ಶ್ರೀಕಲಾ ಕಾರಂತ್, ರೇಖಾ ಸುದೇಶ್ ರಾವ್, ಸರ್ವ ಅರಸ ಶೆಟ್ಟಿ, ದೀಪ್ತಿ ಅಡತ್ಕ, ಅಶೋಕ ಎನ್ . ಕಡೇಶೀವಾಲಯ, ವಿಂದ್ಯಾ ಎಸ್. ರೈ, ತುಳಸಿ ಕೈರಂಗಳ, ನಾರಾಯಣ ಕುಂಬ್ರ, ರಾಧಕೃಷ್ಣ ಎರುಂಬು ಕವನ ವಾಚಿಸಿದರು.

ಪತ್ರಕರ್ತ ರೇಮಂಡ್ ಡಿ ಕುನ್ಹಾ, ಡಾ.‌ಮಾಲತಿ ಶೆಟ್ಟಿ ಮಾಣೂರು, ಯು.ಆರ್. ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡೊಂಬಯ್ಯ ಇಡ್ಕಿದು ಸ್ವಾಗತಿಸಿದರು. ರಾಮಾಂಜಿ ಉಡುಪಿ ಕಾರ್ಯಕ್ರಮ ನಿರ್ವಹಿಸಿದರು.

See also  ಆಳ್ವಾಸ್‌ನಲ್ಲಿ ಮೊಳಗಿತು ಸಹಸ್ರಕಂಠ ಗೀತಗಾಯನ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು